ಅಜರಾಮರ ಅಯೋಧ್ಯೆ 
ರಾಜ್ಯ

ಬೆಂಗಳೂರು: ಇಂದು 'ಅಜರಾಮರ ಅಯೋಧ್ಯೆ' ಕೃತಿ ಬಿಡುಗಡೆ

ರಾಮಾಯಣದಲ್ಲಿ ಶ್ರೀರಾಮನ ಜನನಾರಭ್ಯ ವಿಶೇಷ ಘಟನೆಗಳು, ವನವಾಸದ ಹಾದಿ, ರಾಮಜನ್ಮಭೂಮಿ ವ್ಯಾಜ್ಯ, ವಾದ, ಕೋರ್ಟ್ ತೀರ್ಪು ಇಂತಹಾ ಹತ್ತು ಹಲವು ವಿಷಯಗಳ ಸಾಂಗ್ರಹವಾದ "ಅಜರಾಮರ ಅಯೋಧ್ಯೆ" ಕೃತಿ ಶುಕ್ರವಾರ (ಡಿ.6) ಬಿಡುಗಡೆಯಾಗುತ್ತಿದೆ.

ಬೆಂಗಳೂರು: ದೇಶದ ಶ್ರಮಿಕ, ಚಿಂತಕ ವರ್ಗದವರನ್ನು ಸಮಾನವಾಗಿ ಪ್ರಭಾವಿಸಿದ ರಾಮಜನ್ಮಭೂಮಿ ವಿವಾದವು ಜನರ ಸಂಘಟನೆ ಹಾಗೂ ರಾಜಕೀಯ ಆಯಾಮಗಳನ್ನು ಬದಲಿಸಿತು. ಇಂತಹಾ ರಾಮಜನ್ಮಭೂಮಿ, ರಾಮಾಯಣದಲ್ಲಿ ಶ್ರೀರಾಮನ ಜನನಾರಭ್ಯ ವಿಶೇಷ ಘಟನೆಗಳು, ವನವಾಸದ ಹಾದಿ, ರಾಮಜನ್ಮಭೂಮಿ ವ್ಯಾಜ್ಯ, ವಾದ, ಕೋರ್ಟ್ ತೀರ್ಪು ಇಂತಹಾ ಹತ್ತು ಹಲವು ವಿಷಯಗಳ ಸಾಂಗ್ರಹವಾದ "ಅಜರಾಮರ ಅಯೋಧ್ಯೆ" ಕೃತಿ ಶುಕ್ರವಾರ (ಡಿ.6) ಬಿಡುಗಡೆಯಾಗುತ್ತಿದೆ.

"ಅಜರಾಮರ ಅಯೋಧ್ಯೆ" ಕೃತಿಯನ್ನು ಕೆವಿ ರಾಧಾಕೃಷ್ಣ ಅವರು ರಚಿಸಿದ್ದು ಡಿ.6ರ ಸಂಜೆ ಆರಕ್ಕೆ ಬಸವನಗುಡಿ ರಸ್ತೆಯ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ ಪಕ್ಕದಲ್ಲಿನ "ಜಸ್ಟ್ ಬುಕ್ಸ್" ಅಂಗಣದಲ್ಲಿ ಪುಸ್ತಕ ಬಿಡುಗಡೆ ಸಮಾರಂಭ ನಡೆಯಲಿದೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಪುಸ್ತಕವನ್ನು ಬಿಡುಗಡೆ ಮಾಡಲಿದ್ದಾರೆ. ಅಯೋಧ್ಯೆ ತೀರ್ಪಿನ ಬಳಿಕ ಸಾಮಾನ್ಯ ಸಂವಹನದ ಕುರಿತು ಖ್ಯಾತ ಅಂಕಣಕಾರ ರೋಹಿತ್ ಅವರು ಮಾತನಾಡಲಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT