ರಾಜ್ಯ

ಪ್ರಜಾಪ್ರಭುತ್ವದ ಮೌಲ್ಯಗಳು ಹಂತ ಹಂತವಾಗಿ ಕುಸಿಯುತ್ತಿವೆ- ಸಂತೋಷ್ ಹೆಗ್ಡೆ ವಿಷಾದ

Nagaraja AB

ಬೆಂಗಳೂರು: ಮಾನವೀಯತೆ ಎಂಬುದು ನಮ್ಮ ಸಮಾಜದಲ್ಲಿ ಹಿರಿಯರು ಕಟ್ಟಿದ ಮೌಲ್ಯ, ಮಾನವ ಎಂದು ಹೇಳುವುದು ಪ್ರಮುಖವಲ್ಲ ಅದನ್ನು ಕಾರ್ಯರೂಪಗೊಳಿಸುವುದು ಮಾನವೀಯತೆ‌ ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ  ಸಂತೋಷ್ ಹೆಗ್ಡೆ ಅಭಿಪ್ರಾಯ ಪಟ್ಟರು.

ಪತ್ರಕರ್ತರ ಭವನದಲ್ಲಿಂದು ಕರ್ನಾಟಕ ಮಾನವ ಹಕ್ಕುಗಳ ಜನ ಜಾಗೃತಿ ವೇದಿಕೆ ಆಯೋಜಿಸಿದ್ದ, ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇಂದು ದೇಶದಲ್ಲಿನ ಪ್ರಜಾ ಪ್ರಭತ್ವದ ಮೌಲ್ಯಗಳು ಹಂತ ಹಂತವಾಗಿ ಕುಸಿಯುತ್ತಿದ್ದು ಕೆಲವರು, ಕೆಲವರಿಗಾಗಿ, ಕೆಲವರಿಗೋಸ್ಕರವಾಗಿಯೇ ಸ್ವಾತಂತ್ರ್ಯ ಸೀಮಿತಮಾಗಿದೆ. ಜನಪ್ರತಿನಿಧಿಗಳು ಜನರ ಸೇವಕರಲ್ಲ ಮಾಲೀಕರೆಂಬ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಒಬ್ಬ ವ್ಯಕ್ತಿಯಿಂದ ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತಿಲ್ಲ. ಅದು ಇಡೀ ಸಮಾಜದಿಂದಲೇ ಆಗುತ್ತಿದೆ. ತಳಮಟ್ಟದ ಜನರಿಗೆ ಸಂವಿಧಾನದ ಆಶಯದಂತೆ ಸಿಗಬೇಕಾದ ಎಲ್ಲಾ ಸೌಲಭ್ಯಗಳು ಇಂದು ಶ್ರೀಮಂತರ ಪಾಲಾಗುತ್ತಿವೆ. ಸಾಮಾಜಿಕ ಮೌಲ್ಯಗಳ ಹರಣದಿಂದ ಗೌರವಯುತವಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಯಾರಲ್ಲಿ ಅಧಿಕಾರ, ಶಕ್ತಿ, ಹಣವಿದೆಯೋ ಅಂತಹ ವ್ಯಕ್ತಿಗಳ ಅಭಿವೃದ್ಧಿಯಾಗುತ್ತಿದೆ. ಬಡವರ, ಹಿಂದುಳಿದವರ ಅಭಿವೃದ್ಧಿ ಯಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು

SCROLL FOR NEXT