ಭಾಸ್ಕರ್ ರಾವ್ 
ರಾಜ್ಯ

ಸಾರ್ವಜನಿಕರೇ ಹುಷಾರ್ : ಮಾಲ್, ಶಾಪ್ ಗಳಲ್ಲಿ ಮೊಬೈಲ್ ನಂಬರ್ ಶೇರ್ ಮಾಡಬೇಡಿ- ಭಾಸ್ಕರ್ ರಾವ್ ಟ್ವೀಟ್ 

ನಿಮ್ಮ ಮೊಬೈಲ್​ ನಂಬರ್​ಗಳನ್ನು ಮಾಲ್​ ಅಥವಾ ಶಾಪ್​ಗಳಲ್ಲಿ ಶೇರ್ ​  ಮಾಡಬೇಡಿ. ಅವರು ಕೇಳಿದರೂ ನಂಬರ್​ ಕೊಡುವುದಕ್ಕೆ ನಿರಾಕರಿಸಿ ಎಂದು ನಗರ ಪೊಲೀಸ್​ ಆಯುಕ್ತ ಭಾಸ್ಕರ್​ ರಾವ್  ಟ್ವೀಟ್ ಮಾಡಿದ್ದಾರೆ. 

ಬೆಂಗಳೂರು : ಟ್ವಿಟ್ಟರ್​ನಲ್ಲಿ  ಸದಾ ಕ್ರಿಯಾಶೀಲವಾಗಿರುವ ನಗರ ಪೊಲೀಸ್​ ಆಯುಕ್ತ ಭಾಸ್ಕರ್​ ರಾವ್ ಅವರು  ಜನಸ್ನೇಹಿ ಟ್ವೀಟ್​‌ ಮಾಡುವುದರ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವುದರಲ್ಲಿ ಎತ್ತಿದ  ಕೈ. ಈಗ ಆಯುಕ್ತರು, ಸೈಬರ್​ ಕ್ರೈಮ್​ ತಡೆಗಟ್ಟಲು ಜನರು ಏನು ಮಾಡಬೇಕು ಎಂಬುದರ ಕುರಿತು ಸರಳ ಸಂದೇಶವನ್ನು ಹಂಚಿಕೊಂಡಿದ್ದಾರೆ‌. 

ಈ  ಬಗ್ಗೆ ಟ್ವೀಟ್​ ಮಾಡಿರುವ ಭಾಸ್ಕರ್ ರಾವ್ , ಸೈಬರ್​​ ಕ್ರೈಂ ತಡೆಯಲು ಮೊದಲ ಹೆಜ್ಜೆ ,  ನಿಮ್ಮ ಮೊಬೈಲ್​ ನಂಬರ್​ಗಳನ್ನು ಮಾಲ್​ ಅಥವಾ ಶಾಪ್​ಗಳಲ್ಲಿ ಶೇರ್ ​  ಮಾಡಬೇಡಿ. ಅವರು ಕೇಳಿದರೂ ನಂಬರ್​ ಕೊಡುವುದಕ್ಕೆ ನಿರಾಕರಿಸಿ ಎಂದು ಸಲಹೆ ನೀಡಿದ್ದಾರೆ.

ಮೊಬೈಲ್ ನಂಬರ್ ಶೇರ್ ಮಾಡುವುದರಿಂದ  ನಿಮ್ಮ ನಂಬರ್​ ಡೇಟಾ ಆಗಿ ಮಾರಾಟವಾಗುತ್ತದೆ. ಹೀಗಾಗಿ ಸೈಬರ್​​ ವಂಚನೆಗೆ ನೀವೇ ಬಾಗಿಲು  ತೆರೆದಂತೆ ಆಗುತ್ತದೆ. ಆದ್ದರಿಂದ ಮೊಬೈಲ್ ಫೋನ್​ ನಂಬರ್​ ಅನ್ನು ಶೇರ್​  ಮಾಡಬೇಡಿ ಕೊಳ್ಳಬೇಡಿ ಎಂದು ಬರೆದುಕೊಳ್ಳವ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಲಾಲ್ ಬಾಗ್ ಅಭಿವೃದ್ಧಿಗೆ 10 ಕೋಟಿ ರೂ; ಸುರಂಗ ರಸ್ತೆ ಯೋಜನೆಯಿಂದ ಸಸ್ಯೋದ್ಯಾನದ ಮೇಲೆ ಯಾವುದೇ ಎಫೆಕ್ಟ್ ಆಗಲ್ಲ: ಡಿ.ಕೆ ಶಿವಕುಮಾರ್; Video

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: ಒಂದಾದ ಜಾರಕಿಹೊಳಿ ಬ್ರದರ್ಸ್‌ಗೆ ಜಾಕ್‌ಪಾಟ್; ರಮೇಶ್ ಕತ್ತಿ ಬಣಕ್ಕೆ ಶಾಕ್!

ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆಯೇ Maria Corina Machado ವಿವಾದಕ್ಕೆ ಗುರಿ; ಭುಗಿಲೆದ್ದ ಅಶಾಂತಿ!

Shocking: ಹೆಣ್ಣಿನ ಶವ ಎಳೆದೊಯ್ದು ಶವಾಗಾರದಲ್ಲೇ ಅತ್ಯಾಚಾರ, 25ರ ಯುವಕನಿಂದ ಪೈಶಾಚಿಕ ಕೃತ್ಯ, CCTV Video

Belagavi: ಲವರ್ ಜೊತೆ ಮಗಳು ಪರಾರಿ; ಇಡೀ ಊರಿಗೆ 'ತಿಥಿ' ಊಟ ಹಾಕಿಸಿದ ತಂದೆ!

SCROLL FOR NEXT