ಸಾಂದರ್ಭಿಕ ಚಿತ್ರ 
ರಾಜ್ಯ

'ರಾಮನನ್ನು ಮಹಾಪುರುಷನನ್ನಾಗಿಸಿದ್ದೇ ವಾಲ್ಮೀಕಿ'

ಅಯೋಧ್ಯೆಯಲ್ಲಿ ರಾಮ ಭವನ ನಿರ್ಮಾಣ ಮಾಡುವಾಗ ದೇವಾಲಯದ ಒಳಗಡೆ ವಾಲ್ಮೀಕಿ ಮಹರ್ಷಿಗಳ ಪ್ರತಿಮೆ ಸ್ಥಾಪಿಸಬೇಕೆಂದು  ನಾಯಕ ಸಮುದಾಯ ಒತ್ತಾಯಿಸಿದೆ.

ಮೈಸೂರು:  ಅಯೋಧ್ಯೆಯಲ್ಲಿ ರಾಮ ಭವನ ನಿರ್ಮಾಣ ಮಾಡುವಾಗ ದೇವಾಲಯದ ಒಳಗಡೆ ವಾಲ್ಮೀಕಿ ಮಹರ್ಷಿಗಳ ಪ್ರತಿಮೆ ಸ್ಥಾಪಿಸಬೇಕೆಂದು  ನಾಯಕ ಸಮುದಾಯ ಒತ್ತಾಯಿಸಿದೆ.

ವಾಲ್ಮೀಕಿ ರಾಮಾಯಣ ಬರೆದರು, ಹೀಗಾಗಿ ಅವರ ಪ್ರತಿಮೆ ನಿರ್ಮಿಸಬೇಕೆಂದು ಮನವಿ ಸಲ್ಲಿಸಿದ್ದಾರೆ. ರಾಮ ದೇವರ ಹೆಸರಿನ ಜೊತೆ ವಾಲ್ಮೀಕಿ ಹೆಸರನ್ನು ಕಡ್ಡಾಯವಾಗಿ ಬಳಸಬೇಕು, ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯುವ ಅಭಿಯಾನ ಆರಂಭಿಸುವುದಾಗಿ  ನಾಯಕ ಸಮುದಾಯ ಒತ್ತಾಯಿಸಿದೆ.

ಅಯೋಧ್ಯೆಯ ರಾಮ ಭವನದ ಒಳಗೆ ವಾಲ್ಮೀಕಿ ಭವನ ನಿರ್ಮಿಸುವ ಸಲುವಾಗಿ ಜಿಲ್ಲೆಯ ಪ್ರತಿ ಗ್ರಾಮಕ್ಕೂ ಪತ್ರ ಬರೆದು  ಅಭಿಯಾನ ಮಾಡುವುದಾಗಿ  ವಾಲ್ಮೀಕಿ ನಾಯಕ ಸಮಿತಿ ಅಧ್ಯಕ್ಷ ಭೀಮಪ್ಪ ಹೇಳಿದ್ದಾರೆ.

ಧ್ರೋಣಾಚಾರ್ಯರ ನೆನೆಯದೇ ಹೇಳದೇ ಏಕಲವ್ಯನ ಹೆಸರು ಹೇಳಲು ಸಾಧ್ಯವೇ? ರಾಮನನ್ನು ಮಹಾಪುರಷನ್ನಾಗಿಸಿದ್ದೇ  ವಾಲ್ಮೀಕಿ ಎಂದು ಹೇಳಿದ್ದಾರೆ. ರಾಜ್ಯದಲ್ಲಿ 52 ಲಕ್ಷ ವಾಲ್ಮೀಕಿ ಸಮುದಾಯದ ಮಂದಿಯಿದ್ದಾರೆ. ಇಬ್ಬರು 2 ಸಂಸದರು  ಹಾಗೂ 17 ಶಾಸಕರಿದ್ದಾರೆ ಎಂದು ಹೇಳಿದ್ದಾರೆ.

ತಮ್ಮ ಬೇಡಿಕೆಗೆ  ಬೆಂಬಲ ನೀಡುವಂತೆ ಪೇಜಾವರ ಸ್ವಾಮಿಗಳಿಗೆ ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT