ಸ್ವಚ್ಛ ಭಾರತದಿಂದ ಪ್ರೇರಣೆ: ಈ ಗ್ರಾಮದಲ್ಲಿ ಯಶಸ್ವಿಯಾಗಿದೆ ಸ್ವಚ್ಛ ಶನಿವಾರ ಯೋಜನೆ! 
ರಾಜ್ಯ

ಸ್ವಚ್ಛ ಭಾರತದಿಂದ ಪ್ರೇರಣೆ: ಈ ಗ್ರಾಮದಲ್ಲಿ ಯಶಸ್ವಿಯಾಗಿದೆ ಸ್ವಚ್ಛ ಶನಿವಾರ ಯೋಜನೆ! 

ಸ್ವಚ್ಛ ಭಾರತದಿಂದ ಪ್ರೇರಣೆ ಪಡೆದ ಗ್ರಾಮನಸ್ಥರು ತಮ್ಮ ಗ್ರಾಮವನ್ನು ಸ್ವಚ್ಛವಾಗಿರಿಸಿಕೊಳ್ಳುವುದಕ್ಕೆ ಸ್ವಚ್ಛ ಶನಿವಾರ ಯೋಜನೆ ರೂಪುಗೊಳಿಸಿದ್ದು, ಅತ್ಯಂತ ಯಶಸ್ವಿಯಾಗಿದೆ. 

ಬೆಂಗಳೂರು: ಸ್ವಚ್ಛ ಭಾರತದಿಂದ ಪ್ರೇರಣೆ ಪಡೆದ ಗ್ರಾಮನಸ್ಥರು ತಮ್ಮ ಗ್ರಾಮವನ್ನು ಸ್ವಚ್ಛವಾಗಿರಿಸಿಕೊಳ್ಳುವುದಕ್ಕೆ ಸ್ವಚ್ಛ ಶನಿವಾರ ಯೋಜನೆ ರೂಪುಗೊಳಿಸಿದ್ದು, ಅತ್ಯಂತ ಯಶಸ್ವಿಯಾಗಿದೆ. 

ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ಇಂಥದ್ದೊಂದು ಯೋಜನೆ ಕೈಗೊಂಡಿದ್ದು, ಸ್ವಯಂ ಸೇವಕರು ಪ್ರತಿ ತಿಂಗಳ ಶನಿವಾರದಂದು ಗ್ರಾಮವನ್ನು ಸ್ವಚ್ಛಗೊಳಿಸುವ ಕೆಲಸ ಮಾಡುತ್ತಾರೆ. 

ಸ್ವಚ್ಛ ಭಾರತ್ ನೋಡಲ್ ಅಧಿಕಾರಿ ಕಿಶೋರ್ ಕುಮಾರ್ ಈ ಸ್ವಚ್ಛ ಶನಿವಾರ ಕಾರ್ಯಕ್ರಮದ ರುವಾರಿಯಾಗಿದ್ದು, ಪೂರ್ವ ಬೆಂಗಳೂರಿನ ಗ್ರಾಮಗಳಲ್ಲಿ ಮೊದಲ ಬಾರಿಗೆ ಜಾರಿಗೆ ತಂದಿದ್ದರೆಂದು ಗ್ರಾಮ ಪಂಚಾಯಿತಿ ಅಧಿಕಾರಿಗಳು ಹೇಳಿದ್ದಾರೆ. 

ಒಮ್ಮೆ ಈ ಯೋಜನೆ ಯಶಸ್ವಿಯಾಗುತ್ತಿದ್ದಂತೆಯೇ 96 ಗ್ರಾಮ ಪಂಚಾಯ್ತಿಗಳಲ್ಲಿ ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ, ದಕ್ಷಿಣವನ್ನು ಹೊರತುಪಡಿಸಿ ಉಳಿದೆಲ್ಲಾ ಗ್ರಾಮಪಂಚಾಯ್ತಿಗಳೂ ಇದನ್ನು ಅಳವಡಿಸಿಕೊಂಡಿದೆ. ಈ ಪ್ರಕಾರವಾಗಿ ಪ್ರತಿ 3 ನೇ ಶನಿವಾರ ಸ್ವಚ್ಛ ಶನಿವಾರವನ್ನಾಗಿ ಆಚರಣೆ ಮಾಡಲಾಗುತ್ತಿದೆ ಎಂದು ಸ್ವಚ್ಛ ಭಾರತ್ ಮಿಷನ್ ನೋಡಲ್ ಅಧಿಕಾರಿ ಡಾ.ಸಿದ್ದರಾಮಯ್ಯ ಹೇಳಿದ್ದಾರೆ. ಪ್ರತಿ ತಿಂಗಳೂ ಗ್ರಾಮಪಂಚಾಯ್ತಿಗಳ ಮುಖ್ಯಸ್ಥರು ಸಭೆ ನಡೆಸುತ್ತಾರೆ. ಆ ತಿಂಗಳಲ್ಲಿ ಸ್ವಚ್ಛಗೊಳಿಸಬೇಕಿರುವ ಒಂದು ಗ್ರಾಮವನ್ನು ಆಯ್ಕೆ ಮಾಡಲಾಗುತ್ತದೆ. ಸ್ವಚ್ಛ ಶನಿವಾರ ಯೋಜನೆಗೆ ಯುವಕರು, ಹಿರಿಯರು ಸೇರಿದಂತೆ ಎಲ್ಲರಿಂದಲೂ ಸಕಾರಾತ್ಮಕ ಪ್ರತಿಸ್ಪಂದನೆ ದೊರೆತಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆಯೇ Maria Corina Machado ವಿವಾದಕ್ಕೆ ಗುರಿ; ಭುಗಿಲೆದ್ದ ಅಶಾಂತಿ!

Aligarh Businessman Murder: ಹಿಂದೂ ಮಹಾಸಭಾ ನಾಯಕಿ ಪೂಜಾ ಶಕುನ್ ಪಾಂಡೆ ಬಂಧನ! ಉದ್ಯಮಿಗೆ ಲೈಂಗಿಕ ಕಿರುಕುಳ ನೀಡಿದ್ರಾ?

'China isn't afraid': ಅಮೆರಿಕದ ಶೇ.100 ರಷ್ಟು ಸುಂಕದ ಬಗ್ಗೆ ಚೀನಿಯರ ಪ್ರತಿಕ್ರಿಯೆ!

ಲಾಲ್ ಬಾಗ್ ಅಭಿವೃದ್ಧಿಗೆ 10 ಕೋಟಿ ರೂ; ಸುರಂಗ ರಸ್ತೆ ಯೋಜನೆಯಿಂದ ಸಸ್ಯೋದ್ಯಾನದ ಮೇಲೆ ಯಾವುದೇ ಎಫೆಕ್ಟ್ ಆಗಲ್ಲ: ಡಿ.ಕೆ ಶಿವಕುಮಾರ್; Video

SCROLL FOR NEXT