ರಾಜ್ಯ

ಹೊಸಪೇಟೆ: ಸೂರ್ಯ ಗ್ರಹಣದ ಹಿನ್ನೆಲೆ ಯಾವುದೇ ಆಸರೆ ಇಲ್ಲದೆ ಒನಕೆ ನಿಲ್ಲಿಸಿದ ಗ್ರಾಮಸ್ಥರು

Srinivasamurthy VN

ಹೊಸಪೇಟೆ: ಸೂರ್ಯ ಗ್ರಹಣದ ಹಿನ್ನೆಲೆ ಯಾವುದೇ ಆಸರೆ ಇಲ್ಲದೆ ಒನಕೆ ನಿಲ್ಲಿಸುವ ಮೂಲಕ ಹೊಸಪೇಟೆಯ ಗ್ರಾಮಸ್ಥರು ಅಚ್ಚರಿಗೆ ಕಾರಣವಾಗಿದ್ದಾರೆ.

ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲೂಕು ಮಿರಾಕೊರನ ಹಳ್ಳಿ, ಹಿರೇಕೊಳಚಿ ಗ್ರಾಮ ಸೇರಿದಂತೆ ಇನ್ನೂ ಹಲವು ಗ್ರಾಮಗಳಲ್ಲಿ ಗ್ರಾಮಸ್ಥರು ಊಟದ ತಟ್ಟೆಯಲ್ಲಿ ಒನಕೆ ನಿಲ್ಲಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ನೀರು ತುಂಬಿದ ಊಟದ ತಟ್ಟೆಯಲ್ಲಿ ಮಾರುದ್ದ ಒನಕೆ ನಿಲ್ಲಿಸಿ ಇದು ಗ್ರಹಣದ ಎಫೆಕ್ಟ್ ಎಂದು ಹೇಳುತ್ತಿದ್ದಾರೆ.

ಗ್ರಾಮಸ್ಥರ ಈ ಕೈ ಚಳಕಕ್ಕೆ ಸುತ್ತಮುತ್ತಲಿನ ಗ್ರಾಮಸ್ಥರು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದು, ಯಾವುದೇ ಆಸರೆ ಇಲ್ಲದೆ ಒನಕೆ ಊಟದ ತಟ್ಟೆಯಲ್ಲಿ ನಿಲ್ಲುವುದಕ್ಕೆ ಹೇಗೆ ಸಾಧ್ಯ ಎಂದು ತಮ್ಮಲ್ಲೇ ಪ್ರಶ್ನೆ ಹಾಕಿಕೊಳ್ಳುತ್ತಿದ್ದಾರೆ.

SCROLL FOR NEXT