ಸಿದ್ದನಗೌಡ ಮನೆ ಮುಂದೆ ಕಟ್ಟಿಹಾಕಿರುವ ಎತ್ತು 
ರಾಜ್ಯ

ನರಗುಂದ: ಯಜಮಾನನ ಸಾವಿನ ಸುದ್ದಿಯನ್ನು ಮನೆಯವರಿಗೆ ತಲುಪಿಸಿದ ಎತ್ತು!

ತಮ್ಮ ಎತ್ತು ಸದ್ದು ಮಾಡುತ್ತಾ, ಕೂಗುತ್ತಾ ಓಡೋಡಿ ಮನೆಯ ಕಡೆ ಬರುತ್ತಿರುವಾಗ ಸಿದ್ದನಗೌಡ ಗೌಡರ್ ...

ಗದಗ: ತಮ್ಮ ಎತ್ತು ಸದ್ದು ಮಾಡುತ್ತಾ, ಕೂಗುತ್ತಾ ಮನೆಯ ಕಡೆ ಓಡಿ ಬರುತ್ತಿರುವಾಗ ಸಿದ್ದನಗೌಡ ಗೌಡರ್ ಕುಟುಂಬದವರಿಗೆ ಏನೋ ನಡೆದಿದೆ ಎಂದು ಗೊತ್ತಾಯಿತು. ಎತ್ತಿನ ಜೊತೆ ಗದ್ದೆಗೆ ಹೋಗಿದ್ದ ಸಿದ್ದನಗೌಡ ಇರಲಿಲ್ಲ. ಅವರು ನರಗುಂದದ ಸ್ಥಳೀಯರೊಂದಿಗೆ ಗದ್ದೆ ಕಡೆ ಓಡಿ ಹೋಗಿ ನೋಡಿದಾಗ ಸಿದ್ದನಗೌಡ ಗೌಡರ್ ಶವವಾಗಿ ಬಿದ್ದಿದ್ದರು. ಅವರ ತಲೆಗೆ ತೀವ್ರ ಸ್ವರೂಪದ ಪೆಟ್ಟಾಗಿತ್ತು.

37 ವರ್ಷದ ರೈತ ಸಿದ್ದನಗೌಡ ತಮ್ಮ ಗದ್ದೆಯಲ್ಲಿ ಕೊಯ್ದ ಭತ್ತವನ್ನು ಎತ್ತಿನಗಾಡಿಗೆ ತುಂಬುತ್ತಿದ್ದಾಗ ಬಿದ್ದು ತಲೆಗೆ ಏಟಾಗಿ ಮೃತಪಟ್ಟಿದ್ದಾರೆ. ಮನೆಯವರಿಗೆ ಸಿದ್ದನಗೌಡ ಅವರ ವಿಷಯ ತಲುಪಿಸಿದ್ದು ಈ ಮೂಕ ಎತ್ತು. ಕಳೆದ ನಾಲ್ಕು ವರ್ಷಗಳಿಂದ ಈ ಎತ್ತನ್ನು ಸಿದ್ದನಗೌಡ ಕುಟುಂಬದವರು ಸಾಕುತ್ತಿದೆ.

ಗದ್ದೆ ಇರುವುದು ಸಿದ್ದನಗೌಡ ಅವರ ಮನೆಯಿಂದ ಎರಡು ಕಿಲೋ ಮೀಟರ್ ದೂರದಲ್ಲಿ. ಸಿದ್ದನಗೌಡ ಗಾಡಿಯಿಂದ ಬಿದ್ದ ವೇಳೆ ಗದ್ದೆಯಲ್ಲಿ ಯಾರೂ ಇರಲಿಲ್ಲ. ಹೀಗಾಗಿ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದೆ ಮೃತಪಟ್ಟಿರಬಹುದು ಎಂದು ಗ್ರಾಮಸ್ಥ ಶಿವಲಿಂಗು ಹೇಳುತ್ತಾರೆ.

ಆರಂಭದಲ್ಲಿ ಎತ್ತಿಗೆ ಏನೋ ಗಾಯವಾಗಿದೆ ಎಂದು ನಾವು ಅಂದುಕೊಂಡಿದ್ದೆವು. ಹೀಗಾಗಿ ಅದು ಕೂಗುತ್ತಿದೆ ಎಂದು ಭಾವಿಸಿದೆವು. ಆದರೆ ಗಾಡಿಯಲ್ಲಿ ಸಿದ್ದನಗೌಡ ಇಲ್ಲದಾಗ ಕುಟುಂಬದವರಿಗೆ ಏನೋ ಅನಾಹುತ ನಡೆದಿದೆ ಎಂದು ಸಂಶಯ ಬಂದಿತ್ತು ಎನ್ನುತ್ತಾರೆ ಶಿವಲಿಂಗು.

ಸಿದ್ದನಗೌಡ ಮೃತಪಟ್ಟ ನಂತರ ಗ್ರಾಮಸ್ಥರಿಗೆ ಮತ್ತು ಪಟ್ಟಣದವರಿಗೆ ಆ ಎತ್ತು ಮತ್ತು ಎತ್ತಿನ ಗಾಡಿ ಸುದ್ದಿಯ ವಿಷಯವಾಗಿದೆ. ಸಿದ್ದನಗೌಡ ಅವರ ಪತ್ನಿ ರತ್ನವ್ವ ಪೊಲೀಸರಿಗೆ ದೂರು ನೀಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮಗೆ ಅಶ್ಲೀಲ ಕಾಮೆಂಟ್! ಕಿಡಿಗೇಡಿಗಳಿಗೆ ಕೊಟ್ಟ ವಾರ್ನಿಂಗ್ ಏನು?

ಮಿಲಿಟರಿ ದಾಳಿಗೆ ಟ್ರಂಪ್, ನೆತನ್ಯಾಹು ಸಜ್ಜು: ತಿರುಗೇಟು ನೀಡಿದ ಇರಾನ್! ಹೇಳಿದ್ದೇನು ಗೊತ್ತಾ?

ಪಾಕಿಸ್ತಾನದಲ್ಲಿ 'ಗುಂಡಿಟ್ಟು' ಹಿಂದೂ ರೈತನ ಕಗ್ಗೊಲೆ! ಹೈದರಾಬಾದಿನಲ್ಲಿ ಆರೋಪಿಗಳ ಬಂಧನ

SCROLL FOR NEXT