ರಾಜ್ಯ

ಬೆಳಗಾವಿ: ಆಕಸ್ಮಿಕ ಗುಂಡು ತಗುಲಿ ಜಾತ್ರೆಯಲ್ಲಿ ವ್ಯಕ್ತಿ ಸಾವು

Srinivas Rao BV
ಬೆಳಗಾವಿ: ಧವಳೇಶ್ವರ ಗ್ರಾಮದಲ್ಲಿ ನಡೆಯುತ್ತಿದ್ದ ರಂಗೇಶ್ವರ ಜಾತ್ರೆಯಲ್ಲಿ ಆಕಸ್ಮಿಕವಾಗಿ ಹಾರಿದ ಗುಂಡು ತಗುಲಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.
ಜಾತ್ರೆಯ ಸಂದರ್ಭದಲ್ಲಿ ನಡೆಯುವ ತೇರಿನ ಮೆರವಣಿಗೆಯ ಪ್ರತಿ ಸುತ್ತಿನಲ್ಲೂ ಗಾಳಿಯಲ್ಲಿ ಗುಂಡು ಹಾರಿಸುತ್ತಿದ್ದ ಮಹದೇವ ಭೀಮಪ್ಪ ನಾಡಗೌಡ ಎಂಬುವರು, ಐದನೇ ಸುತ್ತಿನ ಮೆರವಣಿಗೆ ಮುಕ್ತಾಯದ ಬಳಿಕ ಹಾರಿಸಿದ ಗುಂಡು ಆಕಸ್ಮಿಕವಾಗಿ ತಗುಲಿದ್ದರಿಂದ ವ್ಯಕ್ತಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಅಧೀಕ್ಷಕ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
ಮೃತನನ್ನು ನಿಜಗುಣಿ ಮಹಾರುದ್ರಪ್ಪ ಅಂಗಡಿ(46) ಎಂದು ಗುರುತಿಸಲಾಗಿದೆ. ಆಕಸ್ಮಿಕ ಗುಂಡು ಹಾರಿದ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.
SCROLL FOR NEXT