ರಾಜ್ಯ

ಮಾಲೀಕರನ್ನು ಕೂಡಿ ಹಾಕಿ ಕೆಲಸಕ್ಕಿದ್ದ ಮನೆಯಲ್ಲಿಯೇ ಕದ್ದ ಕಿರಾತಕರು: ನೇಪಾಳಿಗರಿಂದ ಕೃತ್ಯ

Manjula VN
ಬೆಂಗಳೂರು: ತಾವು ಕೆಲಸ ಮಾಡುತ್ತಿದ್ದ ಮನೆಯಲ್ಲಿಯೇ ಸಹಚರರ ಜೊತೆ ಸೇರಿ ನೇಪಾಳದ ಮೂಲದ ದಂಪತಿ ದರೋಡೆ ಮಾಡಿರುವ ಘಟನೆ ಹೆಚ್ಎಂಟಿ ಲೇಔಟ್ 5ನೇ ಅಡ್ಡ ರಸ್ತೆಯಲ್ಲಿ ಬುಧವಾರ ನಡೆದಿದೆ. 
ಹೆಚ್ಎಂಟಿ ಲೇಔಟ್ ನಿವಾಸಿ ಉದ್ಯಮಿ ನಾರಾಯಣಸ್ವಾಮಿ ಎಂಬುವವರ ಮನೆಯಲ್ಲಿ ಘಟನೆ ನಡೆದಿದೆ. ಮನೆಯಲ್ಲಿ ಕೆಲಸಕ್ಕಿದ್ದ ದಂಪತಿಗಳಾದ ಸುರೇಶ್ ಹಾಗೂ ಆತನ ಪತ್ನಿ ಸುನೀತಾ ಸೇರಿದಂತೆ ಇತರೆ ಐವರು ಸಹಚರರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. 
10 ದಿನಗಳ ಹಿಂತಷ್ಟೇ ನಮ್ಮ ಮನೆಗೆ ನೇಪಾಳ ಮೂಲದ ದಂಪತಿ ಕೆಲಸಕ್ಕೆ ಸೇರಿದ್ದರು. ದೇವನಹಳ್ಳಿ ತಾಲೂಕಿನ ಭಟ್ರಹಳ್ಳಿಯ ದೇವಸ್ಥಾನಕ್ಕೆ ಹೊಸ ವರ್ಷದ ಪ್ರಯುಕ್ತ ವಿಶೇಷ ಪೂಜೆಗಾಗಿ ಡಿ.31 ರಾತ್ರಿಯೇ ಪೋಷಕರು ದೇವಾಲಯಕ್ಕೆ ತೆರಳಿದ್ದರು ಎಂದು ಆದಿತ್ಯ ನಾರಾಯಣ ಸ್ವಾಮಿಯವರು ಹೇಳಿದ್ದಾರೆ. 
ಈ ವೇಳೆ ಮನೆಗೆಲಸದ ಸುರೇಶ್ ಹಾಗೂ ಆತನ ಪತ್ನಿ ಸುನೀತಾ ಅಂಗಳದಲ್ಲಿಯೇ ಕುಳಿತಿದ್ದರು. ರಾತ್ರಿ 11.45ರ ಸುಮಾರಿಗೆ ನಾನು ಸ್ನಾನ ಮಾಡಲು ಮೊದಲ ಮಹಡಿಯ ಕೋಣೆಗೆ ಹೋಗಿದ್ದೆ. ಈ ವೇಳೆ ಪತ್ನಿ ಚೀರಿಕೊಂಡ ಶಬ್ಧ ಕೇಳಿಸಿತು. ಮಂಕಿ ಕ್ಯಾಪ್ ಧರಿಸಿದ್ದ ಐವರು ಪತ್ನಿಯ ತಲೆಯನ್ನು ನೆಲಕ್ಕೆ ಅದುಮಿದ್ದರು. ಕೊಲೆ ಮಾಡೋದಾಗಿ ಬೆದರಿಸಿದರು ಎಂದು ತಿಳಿಸಿದ್ದಾರೆ. 
ಪತಿ ಹಾಗೂ ಪತ್ನಿ ಇಬ್ಬರನ್ನೂ ಕಟ್ಟಿ ಹಾಕಿದ್ದ ಆರೋಪಿಗಳು ದರೋಡೆ ಮಾಡಿದ ಬಳಿಕ ಸ್ಥಳದಿಂದ ಕಾಲ್ಕಿತ್ತಿದ್ದರು. ದೇವಸ್ಥಾನದಿಂದ ಪೋಷಕರು ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. 
ಮನೆಯಲ್ಲಿ ವಸ್ತುಗಳು ಬಿದ್ದಿರುವುದನ್ನು ನೋಡಿದವರಿಗೆ ಗಾಬರಿಯಾಗಿದೆ. ಈ ವೇಳೆ ಮಕ್ಕಳಿಗಾಗಿ ಹುಡುಕಾಡಿದಾಗ ಕಟ್ಟಿಹಾಕಿರುವುದು ಬಂದಿದೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. 
SCROLL FOR NEXT