ರಾಜ್ಯ

ಚಿಕ್ಕಬಳ್ಳಾಪುರ: ಭವಿಷ್ಯ ದಾರುಣವಾಗಿದೆ ಎಂಬ ಭಯಕ್ಕೆ ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ!

Raghavendra Adiga
ಚಿಕ್ಕಬಳ್ಳಾಪುರ: ಭವಿಷ್ಯ ಉತ್ತಮವಾಗಿಲ್ಲ, ದಾರುಣವಾಗಿದೆ ಎನ್ನುವ ಹ್ಯೋತಿಷಿಯ ಮಾತನ್ನು ನಂಬಿ ಮಕ್ಕಳಿಗೆ ವಿಷ ಕೊಟ್ಟು ತಾನೂ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.
ಚಿಕ್ಕಬಳ್ಳಾಪುರ ನಗರದ ಮುನಿಸಿಪಾಲ್ ಕಾಲೇಜು ಸಮೀಪ ನಡೆದ ಪ್ರಕರಣದಲ್ಲಿ ಉಷಾ‌(28) ಮಕ್ಕಳಾದ  ಶಮಂತ್(8) ಹಾಗೂ ಶಾನವಿ(5) ಸಾವನ್ನಪ್ಪಿದ್ದಾರೆ. 
ಉಷಾ ಅವರ ಪತಿ ಅಶ್ವಥ್ ವೃತ್ತಿಯಲ್ಲಿ ಶಿಕ್ಷಕರಾಗಿದ್ದಾರೆ. ಭಾನುವಾರ ಬೆಳಿಗ್ಗೆ ಘಟನೆ ಬೆಳಕಿಗೆ ಬಂದಿದ್ದು ಕುಟುಂಬ ಸದಸ್ಯರ ಆಕ್ರಂದನ ಹೇಳತೀರದ್ದಾಗಿದೆ.
ಘಟನೆ ಸಂಬಂಧ ಚಿಕ್ಕಬಳ್ಳಾಪುರ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಕೈಗೊಂಡಿದ್ದಾರೆ.
SCROLL FOR NEXT