ಕೆರೆಗೆ ಬಿದ್ದ ಕುರಿಗಾಹಿ 
ರಾಜ್ಯ

ಕಾಲುಜಾರಿ ಬಿದ್ದ ಕುರಿಗಾಹಿ: ಆತನನ್ನು ಹುಡುಕಲು ಅರ್ಧ ಕೆರೆ ನೀರು ಖಾಲಿ

ಕೆರೆಯಲ್ಲಿ ನೀರು ಕುಡಿಯಲು ಹೋಗಿ ಕಾಲುಜಾರಿ ಬಿದ್ದು ಕುರಿಗಾಹಿ ಯುವಕ ನೀರಲ್ಲಿ ಮುಳುಗಿರುವ ಘಟನೆ ಜಿಲ್ಲೆಯ ನೂತನ ಕುಕನೂರು ತಾಲೂಕಿನ ತೊಂಡಿಹಾಳ ...

ಕೊಪ್ಪಳ: ಕೆರೆಯಲ್ಲಿ ನೀರು ಕುಡಿಯಲು ಹೋಗಿ ಕಾಲುಜಾರಿ ಬಿದ್ದು ಕುರಿಗಾಹಿ ಯುವಕ ನೀರಲ್ಲಿ ಮುಳುಗಿರುವ ಘಟನೆ ಜಿಲ್ಲೆಯ ನೂತನ ಕುಕನೂರು ತಾಲೂಕಿನ ತೊಂಡಿಹಾಳ ಗ್ರಾಮದ ಬಳಿ ನಡೆದಿದೆ.
ಯಲಬುರ್ಗಾ ತಾಲೂಕಿನ ಕಲ್ಲೂರು ಗ್ರಾಮದ ಇಂದ್ರೇಶ ಹಿರೇಕುರುಬರ (18) ಎಂಬಾತನೆ ನೀರಿನಲ್ಲಿ ಮುಳುಗಿರುವ ಯುವಕ. ಈತ ತೊಂಡಿಹಾಳ ಬಳಿಯ ಕೆರೆಯ ಹತ್ತಿರ ನೀರು ಕುಡಿಯಲೆಂದು ಕೆರೆಗೆ ಇಳಿದಿದ್ದಾನೆ. ಈ ಸಂದರ್ಭದಲ್ಲಿ ಕಾಲುಜಾರಿ ಬಿದ್ದು ನೀರಲ್ಲಿ‌ ಮುಳುಗಿದ್ದಾನೆ.
ಕಲ್ಲೂರು ಗ್ರಾಮದ ಇಂದ್ರೇಶ್ ಕುರಿ ಮೇಯಿಸಲು ತೆರಳಿದ್ದ, 8 ಅಡಿ ಆಳದ ಕೆರೆ ಇದಾಗಿದ್ದು, ಕೆರೆಯಲ್ಲಿ ಬದಿ ತುಂಬಿಕೊಂಡಿತ್ತು. ಕೆರೆಗೆ ಇಳಿದಿದ್ದ ಆತ ಬದಿಯಲ್ಲಿ ಸಿಕ್ಕಿಕೊಂಡಿದ್ದ. 
ಇಂದ್ರೇಶ್ ಸಹೋದರಿ ತನ್ನ ಪೋಷಕರಿಗೆ ಈ ವಿಷಯ ತಿಳಿಸಿದಳು, ಕೂಡಲೇ ಅಗ್ನಿ ಶಾಮಕದಳದವರಿಗೆ ಮಾಹಿತಿ ನೀಡಿದ್ದಾರೆ. ಅಗ್ನಿ ಶಾಮಕ ಸಿಬ್ಬಂದಿ ಕೆರೆಗೆ ಇಳಿದು ಈಜಾಡಿದರೂ ಆತ ಸಿಗಲೇ ಇಲ್ಲ, ಹೀಗಾಗಿ ಕೆರೆಯ ನೀರನ್ನು ಕಾಲಿ ಮಾಡಲಾಯಿತು, ಮಂಗಳವಾರ ಸಂಜೆ ಕೆರೆಗೆ ಬಿದ್ದ ಇಂದ್ರೇಶ್ ಶವ ಬುಧವಾರ ಮಧ್ಯಾಹ್ನ ಪತ್ತೆಯಾಗಿದೆ.
ಕಳೆದ ವರ್ಷವಷ್ಟೇ ಕೆರೆ ತುಂಬಿತ್ತು ಎಂದು ತಹಶೀಲ್ದಾರ್ ರಮೇಶ್ ಅಲ್ವಾಂಡಿಕರ್ ಹೇಳಿದ್ದಾರೆ. ಮರಣೋತ್ತರ ಪರೀಕ್ಷೆ ನಂತರ ಇಂದ್ರೇಶ್ ಶವವನ್ನು ಆತನ ಪೋಷಕರಿಗೆ ಹಸ್ತಾಂತರಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT