ನಿತ್ಯಾನಂದ ಸ್ವಾಮಿ 
ರಾಜ್ಯ

ಇದಪ್ಪಾ ವರಸೆ! ನಾನು ಹೇಳಿದ್ದರಿಂದಲೇ ಸೂರ್ಯ 40 ನಿಮಿಷ ತಡವಾಗಿ ಉದಯಸಿದ; ಬುರುಡೆ ಬಿಟ್ಟ ನಿತ್ಯಾನಂದಸ್ವಾಮಿ

ನಾನು ಹೇಳಿದ್ದರಿಂದಲೇ ಸೂರ್ಯ ಇಂದು 40 ನಿಮಿಷ ತಡವಾಗಿ ಉದಯಿಸಿದ್ದಾನೆ, ಸೂರ್ಯ ನನ್ನ ಮಾತಿನಂತೆ ನಡೆದುಕೊಳ್ಳುತ್ತಾನೆ ಎಂದು ಬಿಡದಿಯ ನಿತ್ಯಾನಂದ ಸ್ವಾಮಿ ...

ಬಿಡದಿ: ನಾನು ಹೇಳಿದ್ದರಿಂದಲೇ ಸೂರ್ಯ ಇಂದು 40 ನಿಮಿಷ ತಡವಾಗಿ ಉದಯಿಸಿದ್ದಾನೆ, ಸೂರ್ಯ ನನ್ನ ಮಾತಿನಂತೆ ನಡೆದುಕೊಳ್ಳುತ್ತಾನೆ ಎಂದು ಬಿಡದಿಯ ನಿತ್ಯಾನಂದ ಸ್ವಾಮಿ ತನ್ನ ಅನುಯಾಯಿಗಳ ಮುಂದೆ ಬುರುಡೆ ಬಿಟ್ಟಿದ್ದಾನೆ.
ಬಿಡದಿಯ ತನ್ನ ಆಶ್ರಮದಲ್ಲಿ ಅನುಯಾಯಿಗಳಿಗೆ ಇತ್ತೀಚೆಗೆ ಪ್ರವಚನ ನೀಡುವಾಗ ಬೆಳಗ್ಗೆ ಧ್ವಜಾರೋಹಣ 6.40 ರಿಂದ 7 ಗಂಟೆಯೊಳಗೆ ಮುಗಿಯಬೇಕು. ಆದರೆ, ಇಂದು ನಾನು ಧ್ವಜಾರೋಹಣಕ್ಕೆ ಬರುವುದು ಸ್ವಲ್ಪ ತಡವಾಯಿತು. ಹಾಗಾಗಿ ನಾನು ದ್ವಜಾರೋಹಣ ಮುಗಿಸುವವರೆಗೂ ಉದಯಿಸದಂತೆ ಸೂರ್ಯನಿಗೆ ತಿಳಿಸಿದ್ದೆ. ಅದರಂತೆ ಇಂದು ಸೂರ್ಯ 40 ನಿಮಿಷ ತಡವಾಗಿ ಉದಯಿಸಿದ್ದಾನೆ.ನನಗೆ ಸೂರ್ಯನನ್ನು ಕಂಟ್ರೋಲ್ ಮಾಡುವ ಸಾಮರ್ಥ್ಯ ನನಗಿದೆ ಎಂದು ಹೇಳಿಕೊಂಡಿದ್ದಾನೆ.
ನನ್ನ ಮಾತಿನ ಮೇಲೆ ನಂಬಿಕೆ ಇಲ್ಲದಿದ್ದರೆ ಗೂಗಲ್​ನಲ್ಲಿ ಇಂದು ಬಿಡದಿಯಲ್ಲಿ ಸೂರ್ಯೋದಯವಾಗಬೇಕಿದ್ದ ಸಮಯ ಮತ್ತು ಸೂರ್ಯೋದಯವಾದ ಸಮಯವನ್ನು ಪರೀಕ್ಷಿಸಿ. ನಾನು ಧ್ವಜಾರೋಹಣ ಮುಗಿಸಿ ಹೊರಬಂದಾಗ ಸೂರ್ಯ ಪೂರ್ವದಲ್ಲಿ ಉದಯಿಸುತ್ತಿದ್ದ. ಮೋಡಗಳಿಂದಾಗಿ ಸೂರ್ಯೋದಯ ತಡವಾಗಲಿಲ್ಲ ಎಂಬುದನ್ನು ನೀವು ಗಮನಿಸಬಹುದು ಎಂದು ತನ್ನ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾನೆ.ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Bihar election 2025: ಎನ್ ಡಿಎ ಸೀಟು ಹಂಚಿಕೆ ಅಂತಿಮ, ಬಿಜೆಪಿ, ಜೆಡಿಯು ತಲಾ 101 ಸ್ಥಾನಗಳಲ್ಲಿ ಸ್ಪರ್ಧೆ! ಚಿರಾಗ್ ಗೆ ದಕ್ಕಿದ್ದೆಷ್ಟು?

ನಾವು ಏಕೆ ತಡೆಯಲಿ... ತಾಂತ್ರಿಕ ಸಮಸ್ಯೆ ಹೊರತು ಉದ್ದೇಶಪೂರ್ವಕವಲ್ಲ: ಮಹಿಳಾ ಪತ್ರಕರ್ತರನ್ನು ದೂರವಿಟ್ಟ ಬಗ್ಗೆ ಮುತ್ತಕಿ ಸ್ಪಷ್ಟನೆ

Afghan-Pak War: 'ಅಲ್ಲಾ ಕಾಪಾಡು' ಅಫ್ಘಾನ್ ಪ್ರತೀಕಾರದ ದಾಳಿ; ಆಗಸದೆತ್ತರಕ್ಕೆ ಚಿಮ್ಮಿದ ಪಾಕ್ ಸೈನಿಕರ ಶವಗಳು, ಗಡಿಯಿಂದ ಕಾಲ್ಕಿತ್ತ ಸೇನೆ, Video

ನಿಮ್ಮ ಮೇಲೆ ಕ್ರಿಮಿನಲ್ ಕೇಸ್ ಗಳಿವೆ; ಯಾರ ಒತ್ತಡಕ್ಕೆ ಒಳಗಾಗಿ Congress ಮರ್ಯಾದೆ ತೆಗೆಯುತ್ತಿದ್ದೀರಾ? ಚಿದಂಬರಂ ವಿರುದ್ಧ ಹೈಕಮಾಂಡ್ ಗರಂ!

ಯಾವುದೇ ಸಿದ್ಧಾಂತ ಅಥವಾ ಅಜೆಂಡಾವನ್ನು ಪ್ರಚಾರ ಮಾಡುತ್ತಿಲ್ಲ; 'ಕಾಂತಾರ: ಚಾಪ್ಟರ್ 1' ಕುರಿತು ರಿಷಬ್ ಶೆಟ್ಟಿ

SCROLL FOR NEXT