ವಿಜಯಪುರ: ನ್ಯಾಯಾಲಯದ ಆವರಣದಲ್ಲಿ ಬಾಲಕನೋರ್ವ ವಿದ್ಯುತ್ ತಗುಲಿ ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ವಿಜಯಪುರ ನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಗುರುವಾರ ನಡೆದಿದೆ.
ಮಾಸಿದ್ದ ಮಲಕಾರಿ ಒಡೆಯರ್(4) ಸಾವನ್ನಪ್ಪಿದ ದುರ್ದೈವಿ ಬಾಲಕ. ಈತ ತನ್ನ ತಂದೆಯ ಜೊತೆಗೆ ಕೌಟುಂಬಿಕ ನ್ಯಾಯಾಲಯಕ್ಕೆ ಆಗಮಿಸಿದ್ದ. ತಂದೆಯೊಂದಿಗೆ ನೀರು ಕುಡಿಯಲು ಹೋದಾಗ ಪಕ್ಕದಲ್ಲಿದ್ದ ಕಂಬದ ಬಳಿ ವಿದ್ಯುತ್ ಪ್ರವಹಿಸಿ ಆತನಿಗೆ ವಿದ್ಯುತ್ ತಗುಲಿದೆ.
ಬಾಲಕನನ್ನು ಬಿಡಿಸಲು ಹೋದ ತಂದೆಗೂ ವಿದ್ಯುತ್ ತಗುಲಿದೆ. ಕೂಡಲೇ ತಂದೆ ದೂರ ಸರಿದಿದ್ದು, ಬಾಲಕನನ್ನು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಆತ ಸಾವನ್ನಪ್ಪಿದ್ದಾನೆ.
ಈ ಕುರಿತು ಜಲನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos