ಹನೀಫ್ ಇಂಟರ್ ನ್ಯಾಷನಲ್ ಟೂರ್ಸ್ ಅ್ಯಂಡ್ ಟ್ರಾವೆಲ್ಸ್ 
ರಾಜ್ಯ

ದಾವಣಗೆರೆ: ಕಡಿಮೆ ದರಕ್ಕೆ ಮೆಕ್ಕಾ ಯಾತ್ರೆ ಮಾಡಿಸುವುದಾಗಿ ಹೇಳಿ ಟೂರಿಸ್ಟ್ ಏಜೆನ್ಸಿಯಿಂದ ದೋಖಾ

ಕಡಿಮೆ ದರದಲ್ಲಿ ಮದೀನಾ ಯಾತ್ರೆ ಮಾಡಿಸುವುದಾಗಿ ಕರೆದೊಯ್ದು ಟೂರಿಸ್ಟ್ ಏಜೆನ್ಸಿಯೊಂದು ಯಾತ್ರಿಕರನ್ನು ವಂಚಿಸಿದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ದಾವಣಗೆರೆ: ಕಡಿಮೆ ದರದಲ್ಲಿ ಮದೀನಾ ಯಾತ್ರೆ ಮಾಡಿಸುವುದಾಗಿ ಕರೆದೊಯ್ದು ಟೂರಿಸ್ಟ್ ಏಜೆನ್ಸಿಯೊಂದು ಯಾತ್ರಿಕರನ್ನು ವಂಚಿಸಿದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಮಲೇಬೆನ್ನೂರು ಗ್ರಾಮದ 82 ಯಾತ್ರಾರ್ಥಿಗಳನ್ನು ಕೇವಲ 35 ಸಾವಿರ ರೂ. ಗೆ ಮದೀನಾ ತೋರಿಸುವುದಾಗಿ ಕರೆದೊಯ್ದ ಅಲ್ಲಿನ ಹನೀಫ್ ಇಂಟರ್ ನ್ಯಾಷನಲ್ ಟೂರ್ಸ್ ಅ್ಯಂಡ್ ಟ್ರಾವೆಲ್ಸ್, ಯಾತ್ರಾರ್ಥಿಗಳನ್ನು ಮದೀನಾದಲ್ಲೇ ಬಿಟ್ಟು ಪರಾರಿಯಾಗಿದೆ.
ಭಾರತಕ್ಕೆ ಹಿಂದಿರುಗಲಾಗದೇ ಮದೀನಾದಲ್ಲಿ ಸಿಲುಕಿಕೊಂಡಿರುವರಿಂದ ವಿಡಿಯೋ ಒಂದು ವೈರಲ್ ಆಗಿದೆ. ಕಳೆದ ಜೂನ್ 19 ರಂದು ಮದೀನಾಕ್ಕೆ ತೆರಳಿದ್ದ ಇವರೆಲ್ಲರೂ ಜುಲೈ 3 ಕ್ಕೆಭಾರತಕ್ಕೆ ವಾಪಸ್ಸಾಗಬೇಕಿತ್ತು. ಆದರೆ, ಅವರನ್ನು ಹೋಟೆಲ್ ನಲ್ಲಿ ಬಿಟ್ಟು ಪರಾರಿಯಾಗಿದೆ ಏಜೆನ್ಸಿ. 
ಸಾಮಾನ್ಯವಾಗಿ ಉಮ್ರಾ ಯಾತ್ರೆಗೆ ಒಬ್ಬರಿಗೆ ಐವತ್ತರಿಂದ ಅರವತ್ತು ಸಾವಿರ ರು. ವೆಚ್ಚವಾಗಲಿದೆ. ಆದರೆ ಇಷ್ಟು ಕಡಿಮೆ ಬೆಲೆ ಯಾತ್ರೆ ಮಾಡಿಸುವುದಾಗಿ ಹೇಳಿದ್ದ ಸಂಸ್ಥೆಯನ್ನು ನಂಬಿ ಜನರು ಮೋಸ ಹೋಗಿದ್ದಾರೆ. 
ಇದೀಗ ಬೈತುಲ್ ಹರಮ್ ಇಂಟರ್ ನ್ಯಾಷನಲ್ ತೂರಿಸ್ಟ್ ಸಂಸ್ಥೆಗೆ ಕರೆ ಮಾಡಿದ್ದರೆ ನಮ್ಮಲ್ಲಿ ಮದೀನಾಗೆ ತೆರಳಲು ಂಆತ್ರವೇ ಬುಕ್ ಮಾಡಲಾಗಿದೆ, ಅಲ್ಲಿಂದ ಹಿಂದಿರುಗಲು ಇಲ್ಲ ಎಂದು ಕೈಚೆಲ್ಲಿದೆ.ಪ್ರವಾಸಿ ತಂಡದೊಡನೆ ಆಗಮಿಸಿದ್ದ ಖಾರಿ ತನ್ವೀರ್ ಎಂಬ ಗೈಡ್ ತಾವೊಬ್ಬರೇ ಭಾರತಕ್ಕೆ ವಾಪಾಸಾಗಿದ್ದಾರೆ. ಈಗ ಅವರ ಮೊಬೈಲ್ ಸಹ ಸ್ವಿಚ್ ಆಫ್ ಆಗಿದೆ.
"ಮೆಕ್ಕಾದಲ್ಲಿ ಹೋಟೆಲ್ ನಿಂದಲೂ ನಮ್ಮನ್ನು ಹೊರಹಾಕಲಾಗಿದೆ, ಊಟಕ್ಕೂ ದುಡ್ಡಿಲ್ಲ, ಬೀದಿಗೆ ಬಿದ್ದ ಸ್ಥಿತಿಯಾಗಿದೆ, ಹಿಂದಿರುಗಲು ಟಿಕೆಟ್ ಇಲ್ಲ, ನಮಗೆ ಸರ್ಕಾರ ಸಹಾಯ ಮಾಡಬೇಕಿದೆ" ವೀಡಿಯೋ ಸಂದೇಶದಲ್ಲಿ ಯಾತ್ರಿಯೊಬ್ಬರು ಹೇಳಿಕೊಂಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಾವು ಏಕೆ ತಡೆಯಲಿ... ತಾಂತ್ರಿಕ ಸಮಸ್ಯೆ ಹೊರತು ಉದ್ದೇಶಪೂರ್ವಕವಲ್ಲ: ಮಹಿಳಾ ಪತ್ರಕರ್ತರನ್ನು ದೂರವಿಟ್ಟ ಬಗ್ಗೆ ಮುತ್ತಕಿ ಸ್ಪಷ್ಟನೆ

ಪಾಕಿಸ್ತಾನ-ಅಫ್ಘಾನಿಸ್ತಾನ ಯುದ್ಧ: 58 ಪಾಕ್ ಸೈನಿಕರು ಹತ, ತಾಲಿಬಾನ್ ಸರ್ಕಾರದ 'ದೊಡ್ಡ' ಹೇಳಿಕೆ

ಭಾರತ- ಬಾಂಗ್ಲಾದೇಶ ಗಡಿ: ರೂ. 2.82 ಕೋಟಿ ಮೌಲ್ಯದ 'ಚಿನ್ನದ ಬಿಸ್ಕತ್ತು' ಜೊತೆಗೆ ಕಳ್ಳಸಾಗಣೆದಾರನನ್ನು ಬಂಧಿಸಿದ BSF!

ದೇಶದ ಮುಸ್ಲಿಂರನ್ನು ಗುರಿಯಾಗಿಸಿಕೊಳ್ಳುವ ಬಿಜೆಪಿ ಅಫ್ಘಾನಿಸ್ತಾನದ ಜೊತೆ ಸಂಬಂಧ ಬೆಳೆಸುವುದು 'ಬೂಟಾಟಿಕೆ': ಮೆಹಬೂಬಾ ಮುಫ್ತಿ

'ಬ್ಲೂ ಸ್ಟಾರ್ ಆಪರೇಷನ್' ಕಾರ್ಯಾಚರಣೆ ತಪ್ಪಿಗೆ ಇಂದಿರಾ ಗಾಂಧಿ ಪ್ರಾಣ ತೆತ್ತರು: ಪಿ ಚಿದಂಬರಂ

SCROLL FOR NEXT