ಬೆಂಗಳೂರು: ಜಲಮಂಡಳಿಯಲ್ಲಿ ನಡೆಯಲಿರುವ ಕೆಲವು ತಾಂತ್ರಿಕ ಕಾಮಗಾರಿಗಳ ಹಿನ್ನೆಲೆಯಲ್ಲಿ ಜುಲೈ21, 22ರಂದು ಎರಡು ದಿನಗಳ ಕಾಲ ಬೆಂಗಳೂರು ನಗರದಾದ್ಯಂತ ಕಾವೇರಿ ನೀರು ಪೂರೈಕೆ ಇರುವುದಿಲ್ಲ.
ಬೆಂಗಳುರಿನ ಟಿ.ಕೆ.ಹಳ್ಳಿ, ಹಾರೋಹಳ್ಳಿ ಹಾಗೂ ತಾತಗುಣಿ ಕಾವೇರಿ ನೀರಿ ಸರಬರಾಜು ಯೋಜನೆ ಪಂಪಿಂಗ್ ಸಿಸ್ಟಮ್ ಕಾರ್ಯಾಚರಣೆ ಯನ್ನು ಸ್ಥಗಿತಗೊಳಿಸಲಾಗುತ್ತಿದ್ದು ಇದರಿಂದ ಖಾವೇರಿ 1, 2, 3 ಹಾಗೂ 4ನೇ ಹಂತದ 1 ಮತ್ತು 2 ನೇ ಘಟ್ಟದ ಪಂಪಿಂಗ್ ಸಿಸ್ಟಮ್ ನಿಲ್ಲಲಿದೆ.ಈ ಕಾರಣಕ್ಕಾಗಿ ಮುಂದಿನ ಎರಡು ದಿನಗಳ ಕಾಲ ಬೆಂಗಳುರು ನಗರದೆಲ್ಲೆಡೆ ಕಾವೇರಿ ನೀರು ಪೂರೈಕೆ ಆಗುವುದಿಲ್ಲ ಎಂದು ಬೆಂಗಳೂರು ಜಲಮಂಡಳಿ ಪತ್ರಿಕಾ ಪ್ರಕಟಣೆ ಹೇಳಿದೆ.