ಕೊಂಕಣ ರೈಲ್ವೆ 
ರಾಜ್ಯ

2020 ರ ಡಿಸೆಂಬರ್ ಗೆ ಕೊಂಕಣ ರೈಲ್ವೆ ವಿದ್ಯುದ್ದೀಕರಣ ಕಾಮಗಾರಿ ಪೂರ್ಣ

ಕೊಂಕಣ ರೈಲ್ವೆಪ್ರಯಾಣಿಕರಿಗೆ ಶುಭಸುದ್ದಿ! ಸಂಪೂರ್ಣ ಕೊಂಕಣ ರೈಲು ಮಾರ್ಗವನ್ನು ವಿದ್ಯುದ್ದೀಕರಣಗೊಳಿಸುವ ಪ್ರಸ್ತಾವವಿದ್ದು ಇದಾಗಲೇ ಈ ಸಂಬಂಧದ ಕಾಮಗಾರಿ ಭರದಿಂಡ ಸಾಗಿದೆ.

ಉಡುಪಿ: ಕೊಂಕಣ ರೈಲ್ವೆಪ್ರಯಾಣಿಕರಿಗೆ ಶುಭಸುದ್ದಿ! ಸಂಪೂರ್ಣ ಕೊಂಕಣ ರೈಲು ಮಾರ್ಗವನ್ನು ವಿದ್ಯುದ್ದೀಕರಣಗೊಳಿಸುವ ಪ್ರಸ್ತಾವವಿದ್ದು ಇದಾಗಲೇ ಈ ಸಂಬಂಧದ ಕಾಮಗಾರಿ ಭರದಿಂಡ ಸಾಗಿದೆ.ಕಾಮಗಾರಿಯು  2020 ರ ಡಿಸೆಂಬರ್ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ. 1,100 ಕೋಟಿ ರೂ. ವೆಚ್ಚದ ಈ ಯೋಜನೆ ರೋಹ (ಮಹಾರಾಷ್ಟ್ರ) ದಿಂದ ತೋಕೂರ್ (ಕರ್ನಾಟಕ) ವರೆಗಿನ ಸಂಪೂರ್ಣ ಕೊಂಕಣ ರೈಲ್ವೆ ವಿಸ್ತರಣೆಯನ್ನು ಎರಡು ವಿಭಾಗಗಳಾಗಿ ವಿಂಗಡಿಸಲಾಗಿದೆ. ರೋಹಾ-ವೆರ್ನಾ ಮತ್ತು ವರ್ನಾ-ತೋಕೂರ್  ಮಾರ್ಗಗಳಲ್ಲಿ ವಿದ್ಯುದೀಕರಣ ಕಾಮಗಾರಿ ಕೈಗೊಳ್ಲಲಾಗುತ್ತಿದೆ.
ರೋಹಾ-ವೆರ್ನಾ ವಿಭಾಗಕ್ಕೆ ಫರೀದಾಬಾದ್‌ನ ಲಾರ್ಸೆನ್ ಆಂಡ್ ಟರ್ಬೋಲಿಮಿಟೆಡ್‌ಗೆ ಮತ್ತು ವರ್ನಾ-ಥೋಕೂರ್ ವಿಭಾಗಕ್ಕೆ ಎಸ್‌ಟಿಎಸ್-ಕೆಪಿಟಿಎಲ್, ನೋಯ್ಡಾ ಸಂಸ್ಥೆಗಳು ವಿದ್ಯುದೀಕರಣ ಕಾಮಗಾರಿಯ ಹೊಣೆ ಹೊತ್ತಿದೆ.ಈಗಾಗಲೇ ಉತ್ತರ ತುದಿರೋಹಾದಿಂದ ಮತ್ತು ದಕ್ಷಿಣ ತುದಿಯಲ್ಲಿರುವ ತೋಕೂರ್‌ನಿಂದ ಏಕಕಾಲದಲ್ಲಿ ಕೆಲಸ ಪ್ರಾರಂಭವಾಗಿದೆ. ಸರಿಸುಮಾರು 105 ಕಿ.ಮೀ ಹಳಿಗಳನ್ನು ವಿದ್ಯುದ್ದೀಕರಿಸಲಾಗಿದ್ದು ಉಳಿದ ಕಾಮಗಾರಿ ಶೀಘ್ರದಲ್ಲೇ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಬಿಜೂರ್ ಮತ್ತು ವೆರ್ನಾ (200 ಕಿ.ಮೀ) ನಡುವಿನ ಕೆಲಸ ಪ್ರಗತಿಯಲ್ಲಿದೆ ಎಂದು ಕೊಂಕಣ ರೈಲ್ವೆಯ ಮೂಲಗಳು ತಿಳಿಸಿವೆ.
ಕಾರವಾರದ ಕೊಂಕಣ ರೈಲ್ವೆಯ ಪ್ರಾದೇಶಿಕ ರೈಲ್ವೆ ವ್ಯವಸ್ಥಾಪಕ ಬಿ ಬಿ ನಿಕಮ್ ಮಾತನಾಡಿ ತೋಕೂರ್‌ನಿಂದ ಬಿಜೂರ್‌ವರೆಗಿನ ಕಾಮಗಾರಿ  ಈಗಾಗಲೇ ಪೂರ್ಣಗೊಂಡಿದ್ದು, ಈಗ ಕಾಮಗಾರಿಯನ್ನು ಬಿಜೂರ್‌ನಿಂದ ವೆರ್ನಾಗೆ ವಿಸ್ತರಿಸಲಾಗುತ್ತಿದೆ.2017 ರ ಸೆಪ್ಟೆಂಬರ್‌ನಲ್ಲಿ ವಿದ್ಯುದೀಕರಣ ಕಾರ್ಯ ಪ್ರಾರಂಭವಾಗಿದೆ ಎಂದರು.
ಈ ವಿದ್ಯುದೀಕರಣವು ಹಲವಾರು ಪ್ರಯೋಜನಗಳನ್ನು ಒಳಗೊಂಡಿದೆ. ಎಂದು ಜ್ಞರು ಅಭಿಪ್ರಾಯಪಟ್ಟಿದ್ದಾರೆ. ಮತ್ಸ್ಯಗಂಧ ಎಕ್ಸ್‌ಪ್ರೆಸ್ ಪ್ರಸ್ತುತ ಮಂಗಳೂರು ಸೆಂಟ್ರಲ್ ಮತ್ತು ಮುಂಬೈನ ಲೋಕಮಾನ್ಯ ತಿಲಕ್ ಟರ್ಮಿನಸ್ ನಡುವೆ ಸಂಚರಿಸಲು 16 ಗಂಟೆ ತೆಗೆದುಕೊಳ್ಳುತ್ತದೆ. ರೈಲಿನ ಸರಾಸರಿ ವೇಗ 45-50 ಕಿ.ಮೀ. ಇದೆ ಆದರೆ ಕಾಮಗಾರಿ ಮುಗಿದ ತರುವಾಯ ರೈಲು ಗಂಟೆಗೆ 80-100 ಕಿ.ಮೀ ವೇಗದಲ್ಲಿ ಚಲಿಸುವುದು ಸಾಧ್ಯವಿದೆ ಎಂದು ಅವರು ಹೇಳುಇದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮಗೆ ಅಶ್ಲೀಲ ಕಾಮೆಂಟ್! ಕಿಡಿಗೇಡಿಗಳಿಗೆ ಕೊಟ್ಟ ವಾರ್ನಿಂಗ್ ಏನು?

ಮಿಲಿಟರಿ ದಾಳಿಗೆ ಟ್ರಂಪ್, ನೆತನ್ಯಾಹು ಸಜ್ಜು: ತಿರುಗೇಟು ನೀಡಿದ ಇರಾನ್! ಹೇಳಿದ್ದೇನು ಗೊತ್ತಾ?

ಪಾಕಿಸ್ತಾನದಲ್ಲಿ 'ಗುಂಡಿಟ್ಟು' ಹಿಂದೂ ರೈತನ ಕಗ್ಗೊಲೆ! ಹೈದರಾಬಾದಿನಲ್ಲಿ ಆರೋಪಿಗಳ ಬಂಧನ

SCROLL FOR NEXT