ರಾಹುಲ್‌ ವಸಂತ ಶಿಂಧೆ 
ರಾಜ್ಯ

ಪಶ್ಚಿಮ ಬಂಗಾಳದಲ್ಲಿ ನಕ್ಸಲ್ ದಾಳಿ: ಖಾನಾಪುರದ ಯೋಧ ಹುತಾತ್ಮ

ಖಾನಾಪುರ: ಪಶ್ಚಿಮ ಬಂಗಾಳದಲ್ಲಿ ನಡೆದ ನಕ್ಸಲ್ ದಾಳಿಯಲ್ಲಿ ಬೆಳಗಾವಿ ಜಿಲ್ಲೆ ಕಾನಾಪುರದ ಯೋಧ ಹುತಾತ್ಮರಾಗಿದ್ದಾರೆ.

ಖಾನಾಪುರ: ಪಶ್ಚಿಮ ಬಂಗಾಳದಲ್ಲಿ ನಡೆದ ನಕ್ಸಲ್ ದಾಳಿಯಲ್ಲಿ ಬೆಳಗಾವಿ ಜಿಲ್ಲೆ ಕಾನಾಪುರದ ಯೋಧ ಹುತಾತ್ಮರಾಗಿದ್ದಾರೆ. ಖಾನಾಪುರ ತಾಲೂಕು ನಾವಗಾ  ಗ್ರಾಮದ ಬಿಎಸ್‌ಎಫ್‌ ಯೋಧ ರಾಹುಲ್‌ ವಸಂತ ಶಿಂಧೆ (25)  ನಕ್ಸಲ್ ದಾಳಿಗೆ ಬಲಿಯಾಗಿದ್ದಾರೆ.

ಬಿಎಸ್‌ಎಫ್‌ 117ನೇ ಬಟಾಲಿಯನ್‌ ಯೋಧರಾಗಿದ್ದ ರಾಹುಲ್ ರಾತ್ರಿ ಪಾಳಿ ಮುಗಿಸಿ ಶಿಬಿರದತ್ತ ಹೊರಟಿದ್ದಾಗ ನಕ್ಸಲರು ಗುಂಡಿನ ದಾಲಿ ನಡೆಸಿದ್ದಾರೆ.ಈ ವೇಳೆ ರಾಹುಲ್ ಸೇರಿದಂತೆ ಒಟ್ಟು ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ.

ರಾಹು;ಲ್ ಹುತಾತ್ಮರಾಗಿರುವ ಸಂಬಂಧ ಬಿಎಸ್‌ಎಫ್‌ ಅಧಿಕಾರಿಗಳು ಅವರ ತಂದೆ  ವಸಂತ ಶಿಂಧೆ ಅವರಿಗೆ ಭಾನುವಾರ ಮಧ್ಯಾಹ್ನ ಮಾಹಿತಿ ನೀಡಿದ್ದು ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಕೋಲ್ಕತ್ತಾ, ಗೋವಾ ಮಾರ್ಗವಾಗಿ ಸೋಮವಾರ ಮಧ್ಯಾಹ್ನದ ವೇಳೆಗೆ ಸ್ವಗ್ರಾಮಕ್ಕೆ ತರಲಾಗುತ್ತದೆ.

2012ರಲ್ಲಿ ಗಡಿ ಭದ್ರತಾ ಪಡೆಯ 117ನೇ ಘಟಕದಲ್ಲಿ ಸೇರ್ಪಡೆಯಾಗಿದ್ದ ರಾಹುಲ್ ಶಿಂಧೆ ಪಂಜಾಬಿನ ವಿಶಾಲಪುರದಲ್ಲಿ ತರಬೇತಿ ಹೊಂದಿದ್ದರು. ನಂತರ ಕಾಶ್ಮೀರ, ಪಂಜಾಬ್, ಜಮ್ಮ, ಸೇರಿ ಅನೇಕ ಬಾಗಗಳಲ್ಲಿ ಸೇವೆ ಸಲ್ಲಿಸಿ ಕಳೆದ ಅಕ್ಟೋಬರ್ ನಿಂದ ಪಶ್ಚಿಮ ಬಂಗಾಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ರಾಹುಲ್ ಪದವಿ ಶಿಕ್ಷಣ ಮುಗಿಸಿದ್ದು ಅವರ ತಂದೆ ವಸಂತ್ ಶಿಂಧೆ ಕೃಷಿಕರಾಗಿದ್ದಾರೆ.ತಾಯಿ ಸುಜಾತಾ ಗೃಹಿಣಿ, ಓರ್ವ ಸೋದರ, ಓರ್ವ ಸೋದರಿ ಇದ್ದಾರೆ.  ಇವರ ಸೋದರ ಸಹ ಇಂಡೋ ಟಿಬೆಟಿಯನ್ ಬಾರ್ಡರ್ ಪೋಲೀಸ್ ಆಗಿದ್ದಾರೆ. ಇನ್ನು ವಸಂತ್ ಶಿಂಧೆ ಅವರ ಸೋದರ ಸಹ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಹೀಗೆ ಅವರ ಕುಟುಂಬ ಹಲವು ಜನರು ದೇಶಸೇವೆಗಾಗಿ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ ಎನ್ನುವುದು ಗಮನಾರ್ಹ.

ವಿವಾಹ ನಿಶ್ಚಯವಾಗಿತ್ತು
ಮೃತ ಯೋಧ ರಾಹುಲ್ ಶಿಂಧೆ ಅವರ ವಿವಾಹ ಖಾನಾಪುರದ ಪಗಾಂವ ಗ್ರಾಮದ ಯುವತಿಯೊಡನೆ ನಿಶ್ಚಯವಾಗಿತ್ತು. ಕಳೆದ ಡಿಸೆಂಬರ್ 14ರಂದು  ಎರಡು ಕುಟುಂಬಗಳ ಸಮ್ಮುಖದಲ್ಲಿ ನಿಶ್ಚಿತಾರ್ಥ ನೆರವೇರಿತ್ತು. ಮೇ ತಿಂಗಳಲ್ಲಿ ರಜೆ ಮೇಲೆ ಊರಿಗೆ ಬಂದಾಗ ವಿವಾಹವಾಗುವುದಾಗಿ ರಾಹುಲ್ ಹೇಳಿದ್ದರು. ಆದರೆ ಇದೀಗ ನಕ್ಸಲರ ದಾಳಿಗೆ ಹುತಾತ್ಮರಾಗಿರುವ ರಾಹುಲ್ ಅಗಲಿಕೆ ಅವರ ಕುಟುಂಬ, ಗ್ರಾಮಸ್ಥರಿಗೆ ಭರಿಸಲಾರದ ನೋವು ತಂದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT