ಬೆಂಗಳೂರು: ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಜಿಲ್ಲೆ ಕಡಿಮೆ ಪಲಿತಾಂಶ ಪಡೆದಿರುವುದಕ್ಕೆ ಮಹಿಳಾ ಶಿಕ್ಷಕಿಯರೇ ನೇರ ಹೊಣೆ ಎಂದು ಬಾಗಲಕೋಟೆ ಡಿಡಿಪಿಐ ಬಿಎಚ್ ಗೋನಾಳ್ ಹೇಳಿದ್ದಾರೆ.
ಮಹಿಳಾ ಶಿಕ್ಷಕಿಯರು ಹೆರಿಗೆ ರಜೆಗೆಂದು 5 ತಿಂಗಳು ಹೋಗುತ್ತಾರೆ, ಹೀಗಾಗಿ ಅವರ ಸ್ಥಾನಕ್ಕೆ ಬೇರೆಯವರನ್ನು ಕರೆತರುವುದು ಕಷ್ಟ, ನಾವು ಮೊದಲ 15 ಜಿಲ್ಲೆಗಳ ಪಟ್ಟಿಯಲ್ಲಿ ಬಾಗಲಕೊಟೆ ಹೆಸರು ಇರುತ್ತದೆಂದು ನಂಬಿದ್ದೇವು, ಆದರೆ 27ನೇ ಸ್ಥಾನದಲ್ಲಿವೆ. ಈ ವರ್ಷ ಮೊದಲಿನಿಂದಲೇ ಕೆಲಸ ಆರಂಭಿಸುತ್ತೇವೆ, ಮೊದಲ ತಿಂಗಳಿನಿಂದಲೇ ಸಿದ್ಧತೆ ನಡೆಸುತ್ತೇವೆ ಎಂದು ಹೇಳಿದ್ದಾರೆ.
ರಾಜ್ಯದ ಒಟ್ಟು ಫಲಿತಾಂಶದಲ್ಲಿ ಬಾಗಲಕೋಟೆ 27ನೇ ಸ್ಥಾನ ಪಡೆದು ಕೊಂಡಿದೆ.ಶೇಕಡವಾರು 75.28 ಫಲಿತಾಂಶ ಬಂದಿದೆ, ಕಳೆದ ವರ್ಷ 25 ನೇ ಸ್ಥಾನದಲ್ಲಿತ್ತು.