ರಾಜ್ಯ

ವಿಜಯಪುರ: ಶವಸಂಸ್ಕಾರ ಮುಗಿಸಿ ವಾಪಾಸಾಗುವಾಗ ಟಾಟಾ ಏಸ್ ಪಲ್ಟಿ, ಐವರು ಸಾವು

Raghavendra Adiga
ಮುದ್ದೇಬಿಹಾಳ: ಸಂಬಂಧಿಕರ ಶವ ಸಂಸ್ಕಾರ ಮುಗಿಸಿ ಬರುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಟಾಟಾ ಏಸ್ ವಾಹನ ಪಲ್ಟಿಯಾಗಿದ್ದು ಇಬ್ಬರು ಮಹಿಳೆಯರು ಸೇರಿ ಐವರು ಸಾವನ್ನಪ್ಪಿರುವ ದಾರುಣ ಘಟನೆ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಕಂದಗನೂರು ಗ್ರಾಮದ ಬಳಿ ನಡೆದಿದೆ.
ಮ್ಮೃತರೆಲ್ಲರೂ ಬಾಗಲಕೋಟೆ ಜಿಲ್ಲೆ ಗುಳೇನಗುಡ್ಡದ ಹಳದೂರ ಗ್ರಾಮಸ್ಥರಾಗಿದ್ದಾರೆ.ಮೃತಪಟ್ಟವರ ವಿವರ ಇನ್ನೂ ಲಭ್ಯವಾಗಿಲ್ಲ.
ಘಟನೆಯಲ್ಲಿ ಹತ್ತಕ್ಕೆ ಹೆಚ್ಚು ಮಂದಿಗೆ ಗಾಯಗಳಾಗೈದ್ದು ಅವರನ್ನು ಮುದ್ದೇಬಿಹಾಳದ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಒದಗಿಸಲಾಗಿದೆ..
ಮುದ್ದೇಬಿಹಾಳ ಪೋಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
SCROLL FOR NEXT