ಮಂಡ್ಯ: ಮಂಚಕ್ಕೆ ಬಾರದ ಸೊಸೆಯನ್ನು ಕೊಂದ ಮಾವ ಜೈಲಲ್ಲಿ ಆತ್ಮಹತ್ಯೆ! 
ರಾಜ್ಯ

ಮಂಡ್ಯ:ಮಂಚಕ್ಕೆ ಬಾರದ ಸೊಸೆಯನ್ನು ಕೊಂದ ಮಾವ ಜೈಲಲ್ಲಿ ಆತ್ಮಹತ್ಯೆ!

ಕಾಮದಾಸೆ ತೀರಿಸಿಕೊಳ್ಳಲು ಮಂಚಕ್ಕೆ ಕರೆದಾಗ ಬಾರದ ಸೊಸೆಯನ್ನು ಅಮಾನುಶವಾಗಿ ಕೊಂದಿದ್ದ ಮಾವನೊಬ್ಬ ಜೈಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಂಡ್ಯ ಜಿಲ್ಲಾ ಕಾರಾಗೃಹದಲ್ಲಿ ನಡೆದ ಘಟನೆಯಲ್ಲಿ ನಾಗರಾಜು ಎಂಬಾತ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಮಂಡ್ಯ: ಕಾಮದಾಸೆ ತೀರಿಸಿಕೊಳ್ಳಲು ಮಂಚಕ್ಕೆ ಕರೆದಾಗ ಬಾರದ ಸೊಸೆಯನ್ನು ಅಮಾನುಶವಾಗಿ ಕೊಂದಿದ್ದ ಮಾವನೊಬ್ಬ ಜೈಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಂಡ್ಯ ಜಿಲ್ಲಾ ಕಾರಾಗೃಹದಲ್ಲಿ ನಡೆದ ಘಟನೆಯಲ್ಲಿ ನಾಗರಾಜು ಎಂಬಾತ ಆತ್ಮಹತ್ಯೆಗೆ ಶರಣಾಗಿದ್ದಾನೆ.

ನಾಗರಾಜು ತನ್ನ ಮಗ ಅನಿಲ್ ಪತ್ನಿ ವೀಣಾಳನ್ನು ಕೊಲೆ ಮಾಡಿದ ಆರೋಪದ ಮೇಲೆ ಜೈಲು ಸೇರಿದ್ದ. ತನ್ನೊಡನೆ ಮಂಚಕ್ಕೆ ಬರದ ಕಾರಣ ಅಸಮಾಧಾನ ಹೊಂದಿದ್ದ ನಾಗರಾಜು ನವೆಂಬರ್ 9ರಂದು ಸೊಸೆಯನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದ. ಈ ಸಂಬಂಧ ವೀನಾ ಪತಿ, ಆರೋಪಿ ಪುತ್ರನಾದ ಅನಿಲ್  ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು.

ದೂರಿನ ಹಿನ್ನೆಲೆ ಆರೋಪಿ ನಾಗರಾಜುವನ್ನು ಬಂಧಿಸಿದ್ದ ಪೋಲೀಸರು ವಿಚಾರಣೆ ನಡೆಸಿದ್ದು ಕೋರ್ಟ್ ಅವನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.ಆದರೆ ವಿಚಾರಣಾಧೀನ ಖೈದಿಯಾಗಿದ್ದ ನಾಗರಾಜು ಮಂಗಳವಾರ ಮುಂಜಾನೆ ಜೈಲಿನಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆಗ ಅದನ್ನು ಗಮನಿಸಿದ ಪೋಲೀಅರು ಆತನನ್ನು ರಕ್ಷಿಸಿ ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆರೋಪಿ ಮೃತಪಟ್ಟಿದ್ದಾನೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT