ರಾಜ್ಯ

ನೆಲಮಂಗಲ: ಶಾಸಕ ಶಿವಶಂಕರಪ್ಪ ಪುತ್ರನ ಬಿಎಂಡಬ್ಲ್ಯೂ ಕಾರು ಡಿಕ್ಕಿ, ಬೈಕ್ ಸವಾರ ದುರ್ಮರಣ, ಭೀಕರ ದೃಶ್ಯ ಸೆರೆ!

Vishwanath S

ಬೆಂಗಳೂರು: ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪನವರ ಪುತ್ರ ಎಸ್ಎಸ್ ಗಣೇಶ್ ತೆರಳುತ್ತಿದ್ದ ಕಾರು ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ದುರ್ಮರಣ ಹೊಂದಿದ್ದಾರೆ. 

ನೆಲಮಂಗಲದ ದಾಬಸ್ ಪೇಟೆಯ ಕೈಗಾರಿಕಾ ಪ್ರದೇಶದ ಬಳಿ ಈ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಎಸ್ಎಸ್ ನಾಗೇಶ್ ಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಆದರೆ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. 

ಮೃತ ಬೈಕ್ ಸವಾರನನ್ನು ಬೆಂಗಳೂರಿನ ನಿವಾಸಿ  50 ವರ್ಷದ ಯೋಗಾನಂದ್ ಎಂದು ಗುರುತಿಸಲಾಗಿದೆ. ಇನ್ನು ಅಪಘಾತದಲ್ಲಿ ಗಾಯಗೊಂಡಿದ್ದ ಗಣೇಶ್, ಕಾರು ಚಾಲಕ ಮಂಜುನಾಥ್ ಮತ್ತು ವೀರೇಶ್ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. 

SCROLL FOR NEXT