ರಾಜ್ಯ

ಮಂಗಳೂರು: ಗ್ರಾಮಪಂಚಾಯತ್ ಸದಸ್ಯ, ಪತ್ನಿ ಕೊಲೆಗೆ ಯತ್ನ

Raghavendra Adiga

ಮಂಗಳೂರು: ಗ್ರಾಮಪಂಚಾಯತ್ ಸದಸ್ಯನೊಬ್ಬನ ಮನೆಗೆ ನುಗ್ಗಿದ ದುಷ್ಕರ್ಮಿಗಳು ಆತ ಹಾಗೂ ಆತನ ಪತ್ನಿ ಮೇಲೆ ತಲವಾರು ದಾಳಿ ನಡೆಸಿ ಹತ್ಯೆಗೆ ಯತ್ನಿಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳದ ಮೇರಮಜಲುವಿನಲ್ಲಿ ನಡೆದಿದೆ.

ಮೇರುಮಜಲು ನಿವಾಸಿ ಪಂಚಾಯತ್ ಸದಸ್ಯ, ಹಾಗೂ ಕಾಂಗ್ರೆಸ್ ನಾಯಕರಾಗಿರುವ ಯೋಗೀಶ್ ಪ್ರಭು ಹಾಗೂ ಅವರ ಪತ್ನಿ ಶೋಭಾ ಮೇಲೆ ಹಲ್ಲೆ ನಡೆಸಿ ಹತ್ಯೆಗೆ ಯತ್ನಿಸಲಾಗಿದೆ.

ಶುಕ್ರವಾರ ಮುಂಜಾನೆ ನಾಲ್ಕು ಗಂಟೆ ವೇಳೆಗೆ ನಡೆದ ಘಟನೆಯಲ್ಲಿ ಇಬ್ಬರಿಗೂ ಗಾಯಗಳಾಗಿದ್ದು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ದಾಳಿ ನಡೆಸಿರುವ ತಂಡದಲಿ ಮೂವರಿದ್ದರೆಂದು ಂಆಹಿತಿ ಲಭಿಸಿದ್ದು ಕೃತ್ಯಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ,

ಇನ್ನು ಘಟನೆ ಕುರಿತಂತೆ ಗಾಯಾಳುವಾಗಿರುವ ಯೋಗೀಶ್ ಪ್ರಭು ಪೋಲೀಸರಿಗೆ ದೂರಿತ್ತಿದ್ದಾರೆ.

SCROLL FOR NEXT