ರಾಜ್ಯ

ಮಹಿಳೆಯರಿಂದ ಪಂಚಾಯಿತಿಗೆ ಮುತ್ತಿಗೆ: ಬೀಗ ಹಾಕಿ ಪ್ರತಿಭಟನೆ

Srinivasamurthy VN

ಗಂಗಾವತಿ: ಸಾರ್ವಜನಿಕ ಬಳಕೆಯಲ್ಲಿರುವ ಬಯಲು ಶೌಚಾಲಯವನ್ನು ನೆಲಸಮ ಮಾಡಲು ಹೊರಟ ಗ್ರಾಮ ಪಂ ಚಾಯತಿ ಅಧಿಕಾರಿಗಳ ಕ್ರಮ ಖಂಡಿಸಿ ಮಹಿಳೆಯರು ಪಂಚಾಯಿತಿಗೆ ಮುತ್ತಿಗೆ ಹಾಕಿ, ಅಧಿಕಾರಿಗಳನ್ನು ಹೊರಕ್ಕೆ ಎಳೆದು ಬೀಗ ಹಾಕಿದ ಘಟನೆ ತಾಲ್ಲೂಕಿನ ಹಣವಾಳದಲ್ಲಿ ನಡೆದಿದೆ. 

ಗ್ರಾಮದ ಅಂಬೇಡ್ಕರ್ ವೃತ್ತದ ಸಮೀಪ ಇರುವ ಬಯಲು ಮಹಿಳಾ ಶೌಚಾಲಯ ಕಟ್ಟಡ ನೆಲಸಮಕ್ಕೆ ತಾಲ್ಲೂಕು ಪಂಚಾಯತಿಯ ಇಒ ಮೋಹನ್ ನೇತೃತ್ವದಲ್ಲಿ ಸಿಬ್ಬಂದಿ ಮುಂದಾಗಿದ್ದರು. ಇದನ್ನು ವಿರೋಧಿಸಿದ ಮಹಿಳೆಯರು ಸ್ಥಳಕ್ಕೆ ಆಗಮಿಸಿ ಪ್ರತಿಭಟನೆ ನಡೆಸಿದರು. 

ಗ್ರಾಮದ ಎಲ್ಲಾ ಕುಟುಂಬದ ಮಹಿಳೆಯರು ಸ್ಥಿತಿವಂತರಿಲ್ಲ. ಬಯಲು ಶೌಚಾಲಯ ನೆಲಸಮ ಮಾಡಿ ಅದೇ ಸ್ಥಳದಲ್ಲಿ ಸುಸಜ್ಜಿತ ಶೌಚಾಲಯ ನಿಮರ್ಾಣ ಮಾಡಿಕೊಡುವುದಾದರೆ ಮಾತ್ರ ಅವಕಾಶ ಕೊಡುವುದಾಗಿ ಧರಣಿ ನಿರತ ಮಹಿಳೆಯರು ಪಟ್ಟು ಹಿಡಿದರು. 

ಶೌಚಾಲಯ ನೆಲಸಮ ಮಾಡಿ ಗ್ರಾಮ ಪಂಚಾಯಿತಿಯ ಹೆಚ್ಚುವರಿ ಕಟ್ಟಡ ನಿಮರ್ಾಣಕ್ಕೆ ಅಧಿಕಾರಿಗಳು ಯೋಜನೆ ರೂಪಿಸಿದ್ದಾರೆ. ಇದಕ್ಕೆ ಮಹಿಳೆಯರು ವಿರೋಧ ವ್ಯಕ್ತಪಡಿಸಿದ್ದು, ಸುಲಭ ಶೌಚಾಲಯ ಬೇಕಿದ್ದರೆ ಕಟ್ಟಿ ಆದರೆ ಬೇರೆ ಯಾವ ಕಟ್ಟಡಕ್ಕೂ ಅವಕಾಶ ನೀಡುವುದಿಲ್ಲ ಎಂದು ಪಟ್ಟು ಹಿಡಿದರು.

-ಎಂಜೆ ಶ್ರೀನಿವಾಸ್

SCROLL FOR NEXT