ರಾನು ಮಂಡಲ್ 
ರಾಜ್ಯ

ಯುವ ದಸರಾ ಉದ್ಘಾಟನೆಗೆ ಗೈರು: ಮೈಸೂರು ಜನತೆ ಬಳಿ ಕ್ಷಮೆಯಾಚಿಸಿದ ಗಾಯಕಿ ರಾನಿ ಮಂಡಲ್

ಯುವ ದಸರಾ ಉದ್ಘಾಟನೆಗೆ ಗೈರು ಹಾಜರಾಗಿದ್ದ ತೆರಿ ಮೇರಿ ಖ್ಯಾತಿ ಗಾಯಕಿ ರಾನಿ ಮಂಡಲ್ ಅವರು, ವಿಡಿಯೋ ಮೂಲಕ ಮೈಸೂರು ಜನತೆ ಬಳಿ ಕ್ಷಮೆಯಾಚಿಸಿದ್ದಾರೆ. 

ಮೈಸೂರು: ಯುವ ದಸರಾ ಉದ್ಘಾಟನೆಗೆ ಗೈರು ಹಾಜರಾಗಿದ್ದ ತೆರಿ ಮೇರಿ ಖ್ಯಾತಿ ಗಾಯಕಿ ರಾನಿ ಮಂಡಲ್ ಅವರು, ವಿಡಿಯೋ ಮೂಲಕ ಮೈಸೂರು ಜನತೆ ಬಳಿ ಕ್ಷಮೆಯಾಚಿಸಿದ್ದಾರೆ. 

ದಸರಾ ಮಹೋತ್ಸವ ಹಿನ್ನಲೆಯಲ್ಲಿ ಮಂಗಳವಾರ ಮೈಸೂರಿನಲ್ಲಿ ಯುವ ದಸರಾ ಉದ್ಘಾಟನೆಯಾಯಿತು. ಉದ್ಘಾಟನಾ ಕಾರ್ಯಕ್ರಮಕ್ಕೆ ಪಿ.ವಿ. ಸಿಂಧು ಹಾಗೂ ಬಾಲಿವುಡ್ ಹಿನ್ನೆಲೆ ಗಾಯಕಿ ರಾನಿ ಮಂಡಲ್ ಅವರಿಗೆ ಆಹ್ವಾನ ನೀಡಲಾಗಿತ್ತು. ಆದರೆ, ಕಾರ್ಯಕ್ರಮಕ್ಕೆ ರಾನು ಮಂಡಲ್ ಗೈರು ಹಾಜರಾಗಿದ್ದರು. 

ಈ ಹಿನ್ನೆಲೆಯಲ್ಲಿ ವಿಡಿಯೋ ಮೂಲಕ ಕ್ಷಮೆ ಕೇಳಿರುವ ಅವರು, ನಾನು ಅನಾರೋಗ್ಯದಿಂದ ಬಳಲುತ್ತಿದ್ದೇನೆ. ಹೀಗಾಗಿ ಕಾರ್ಯಕ್ರಮಕ್ಕೆ ಬರಲು ಸಾಧ್ಯವಾಗಿಲ್ಲ ಎಂದಿದ್ದಾರೆ.

ನಮಸ್ತೆ, ಮೈಸೂರು ದಸರಾಗೆ ನೀವು ನನಗೆ ಆಹ್ವಾನ ನೀಡಿದ್ದೀರಿ. ಆದರೆ, ಇಂದು ನನಗೆ ಬರಲು ಆಗಲಿಲ್ಲ. ಏಕೆಂದರೆ ನನಗೆ ಆರೋಗ್ಯ ಸಮಸ್ವಿಯ ಇದೆ. ಹೀಗಾಗಿ ನಾನು ಬರಲು ಆಗುತ್ತಿಲ್ಲ. ನಾನು ಬರದೇ ಇರುವುದಕ್ಕೆ ಕ್ಷಮೆ ಕೇಳುತ್ತೇನೆ. ಮುಂದಿನ ಬಾರಿ ಅವಕಾಶ ಸಿಕ್ಕರೆ, ಖಂಡಿತವಾಗಿಯೂ ಬರುತ್ತೇನೆಂದು ಹಿಂದಿಯಲ್ಲಿ ಹೇಳಿಕೊಂಡಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ, Indian Army ಹೆಲಿಕಾಪ್ಟರ್ ರಣರೋಚಕ ಕಾರ್ಯಾಚರಣೆ! video

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

Tamil Nadu: ನಟ-ರಾಜಕಾರಣಿ ದಳಪತಿ ವಿಜಯ್ ಬೌನ್ಸರ್ ಗಳಿಂದ ವ್ಯಕ್ತಿಯ ಮೇಲೆ ಹಲ್ಲೆ ಆರೋಪ! ಕೇಸ್ ದಾಖಲು, ವಿಡಿಯೋದಲ್ಲಿ ಏನಿದೆ?

Udaipur: ನಿಜಕ್ಕೂ ಅಚ್ಚರಿ, 55ನೇ ವಯಸ್ಸಿನಲ್ಲಿ 17ನೇ ಮಗುವಿಗೆ ತಾಯಿಯಾದ ಮಹಿಳೆ!

SCROLL FOR NEXT