ಬೆಂಗಳೂರು: ಕಾಂಗ್ರೆಸ್ಸನ್ನು ರಾಜಕೀಯ ಪಕ್ಷವಾಗಿ ಪರಿವರ್ತಿಸಿ ರಾಜಕೀಯ ಲಾಭ ಪಡೆಯಬಾರದು ಎಂದು ಮಹಾತ್ಮ ಗಾಂಧೀಜಿ ಅವರ ಸದಾಶಯ,ದೂರದೃಷ್ಠಿ ಹಾಗೂ ದೂರದೃಷ್ಟಿ ಯ ಚಿಂತನೆಯಾಗಿತ್ತು ಎಂದು ಇಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹೇಳಿದರು.
ಗಾಂಧೀಜಿ 150ನೇ ಜಯಂತಿ ಪ್ರಯುಕ್ತ ಬುಧವಾರ ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, ಭಾರತಕ್ಕೆ ಸ್ವಾತಂತ್ರ್ಯ ದೊರಕಿಸಿ ಕೊಡುವಲ್ಲಿ ದೇಶದ ಜನರನ್ನು ಸಂಘಟಿಸಲು ಪ್ರಮುಖ ಸಂಘಟನೆ ಯಾಗಿದ್ದ ಕಾಂಗ್ರೆಸ್ಸನ್ನು ದೇಶಕ್ಕೆ ಸ್ವಾತಂತ್ರ್ಯ ದೊರೆ ತೊಡನೆಯೇ ವಿಸರ್ಜಿಸುವಂತೆ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರು ಕರೆ ಕೊಟ್ಟಿದ್ದರು ಎಂಬುದನ್ನು ಸ್ಮರಿಸಿದರು.
ಗಾಂಧೀಜಿ ಅವರ ಅಹಿಂಸಾ ಚಳವಳಿ ಜಗತ್ತನ್ನೇ ನೆಬ್ಬರಗೊಳಿಸಿತು. ಅವರು ತಂದ ಸ್ವಾತಂತ್ರ್ಯವನ್ನು ನಾವಿಂದು ಅನುಭವಿಸುತ್ತಿದ್ದೇವೆ. ಈ ಪುಣ್ಯ ದಿನದಂದು ಗಾಂಧೀಜಿ ಮತ್ತು ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರನ್ನು ನೆನೆಯೋಣ ಎಂದು ತಿಳಿಸಿದರು.