ರಾಜ್ಯ

ಶಿವಮೊಗ್ಗ: ಈಜಲು ತೆರಳಿದ್ದ ಇಬ್ಬರೂ ವಿದ್ಯಾರ್ಥಿಗಳು ನೀರು ಪಾಲು

Lingaraj Badiger

ಶಿವಮೊಗ್ಗ: ಶನಿವಾರ ಶಾಲೆ ಮುಗಿಸಿ ಈಜಲೆಂದು ಕೆರೆಗೆ ತೆರಳಿದ್ದ ಇಬ್ಬರೂ ವಿದ್ಯಾರ್ಥಿಗಳು ನೀರು ಪಾಲಾಗಿರುವ ದಾರುಣ ಘಟನೆ ಜಿಲ್ಲೆಯ ಶಿರಾಳಕೊಪ್ಪ ಸಮೀಪ ನಡೆದಿದೆ.
  
ಮೃತ ವಿದ್ಯಾರ್ಥಿಗಳನ್ನು ಶಂಭು(14) ಹಾಗೂ ಉದಯ್(15) ಎಂದು ಗುರುತಿಸಲಾಗಿದೆ. ಇವರಿಬ್ಬರೂ ಸೇರಿ ಒಟ್ಟು ಆರು ಮಂದಿ ವಿದ್ಯಾರ್ಥಿಗಳು ಬೆಲವಂತನಕೊಪ್ಪ ಗ್ರಾಮದ ನಡುವಲಕಟ್ಟೆ ಕೆರೆಗೆ ಈಜಲೆಂದು ತೆರಳಿದ್ದರು. 

ಕೆರೆಯ ಆಳ ತಿಳಿಯದೇ ವಿದ್ಯಾರ್ಥಿಗಳು ನೀರಿಗಿಳಿದ ಪರಿಣಾಮ ದುರಂತ ಈ ಸಂಭವಿಸಿದೆ ಎಂದು ತಿಳಿದು ಬಂದಿದೆ.   

ಘಟನೆಗೆ ಸಂಬಂಧಿಸಿದಂತೆ ಶಿರಾಳಕೊಪ್ಪ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

SCROLL FOR NEXT