ಬಳ್ಳಾರಿ: ಕೇಸರಿ ಸಿಂಹವೊಂದು ಪ್ರವಾಸಿಗರಿಂದ ಜೀಪ್ ಮೇಲೆ ದಾಳಿ ಮಾಡಲು ಮುಂದಾಗಿದ್ದು ಹಿಂಬಾಲಿಸಿ ಬರುತ್ತಿದ್ದ ಸಿಂಹದ ವೇಗಕ್ಕೆ ಜೀಪ್ ನಲ್ಲಿ ಕುಳಿತ್ತಿದ್ದ ಪ್ರವಾಸಿಗರು ಭಯ ಭೀತರಾಗಿ ಕಿರುಚಿಕೊಂಡಿರುವ ವಿಡಿಯೋ ವೈರಲ್ ಆಗಿದೆ.
ಅಟಲ್ ಬಿಹಾರ ವಾಜಪೇಯಿ ಜ್ಯೂವಲಾಜಿಕಲ್ ಪಾರ್ಕ್ ನಲ್ಲಿ ಸಫಾರಿ ಮಾಡುತ್ತಿದ್ದ ಪ್ರವಾಸಿಗರ ಮೇಲೆ ಸಿಂಹ ದಾಳಿ ಮಾಡಲು ಮುಂದಾಗಿತ್ತು. ಸರಿಸುಮಾರು 1 ಕಿ.ಮೀವರೆಗೆ ಸಿಂಹ ಜೀಪ್ ಅನ್ನು ಹಿಂಬಾಲಿಸಿಕೊಂಡು ಹೋಗಿತ್ತು.
ಹೊಸಪೇಟೆ ತಾಲೂಕಿನ ಕಮಲಾಪುರ ಬಳಿ ಇರುವ ಜ್ಯೂವಲಾಜಿಕಲ್ ಪಾರ್ಕ್ ನಲ್ಲಿ ಈ ಘಟನೆ ನಡೆದಿದೆ. ಬೆಂಬಿಡದೆ ಹಿಂಬಾಲಿಸುತ್ತಿದ್ದ ಸಿಂಹವನ್ನು ಕಂಡ ಪ್ರವಾಸಿಗರು ಸಾಕಪ್ಪ ಸಫಾರಿ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಜೀಪ್ ನಲ್ಲಿದ್ದ ಕೆಲವರು ಈ ದೃಶ್ಯಗಳನ್ನು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗಿದೆ.