ರಾಜ್ಯ

ಗಂಗಾವತಿ: ಮಹಾ ಮಳೆ; ಶ್ರೀಕೃಷ್ಣದೇವರಾಯನ ಸಮಾಧಿ ಜಲಾವೃತ

Vishwanath S

ಗಂಗಾವತಿ: ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ತುಂಗಭದ್ರಾ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಜಲಾಶಯದಲ್ಲಿ ಸಂಗ್ರಹವಾಗುತ್ತಿರುವ ಹೆಚ್ಚುವರಿ ನೀರನ್ನು ನದಿ ಮೂಲಕ ಹೊರಕ್ಕೆ ಬಿಡಲಾಗುತ್ತಿದೆ. 

ಪರಿಣಾಮ ತಾಲ್ಲೂಕಿನ ವಿದೇಶಿಗರ ಹಾಗೂ ಪ್ರವಾಸಿ ತಾಣವಾದ ವಿರುಪಾಪುರಗಡ್ಡೆ ಜಲಾವೃತವಾಗಿದೆ. ಅಲ್ಲದೇ ಆನೆಗೊಂದಿ ಸಮೀಪದ ಐತಿಹಾಸಿಕ ಶ್ರೀಕೃಷ್ಣದೇವರಾಯನ ಸಮಾಧಿ ಬಹುತೇಕ ಜಲಾವೃತವಾಗಿದೆ. 

ವಿರುಪಾಪುರಗಡ್ಡೆಯು ನಡುಗಡ್ಡೆಯಾಗಿದ್ದು, ಗ್ರಾಮದ ಸುತ್ತಲೂ ನದಿಯಿಂದ ಜಲಾವೃತವಾಗಿದೆ. ಹೀಗಾಗಿ ಜನ ಮತ್ತು ವಾಹನ ಸಂಚಾರ ಸಂಪೂರ್ಣ ಸ್ಥಗಿತವಾಗಿದೆ. ಆನೆಗೊಂದಿ ಸಮೀಪದ ನವವೃಂದಾವನಕ್ಕೂ ಸಂಪರ್ಕ ಕಡಿತವಾಗಿದೆ.
 

SCROLL FOR NEXT