ಮಂಡ್ಯ: ಪ್ರವಾಸ ಮುಗಿಸಿ ವಾಪಸ್ಸಾಗುತ್ತಿದ್ದ ಬಸ್ಸೊಂದು ಪಲ್ಟಿಯಾಗಿ ಇಬ್ಬರು ಪ್ರವಾಸಿಗರು ಸಾವನ್ನಪ್ಪಿ, 13 ಕ್ಕೂ ಹೆಚ್ಚು ಮಂದಿ ತೀವ್ರವಾಗಿ ಗಾಯಗೊಂಡಿರುವ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಕದಬಹಳ್ಳಿ ಬಳಿ ಬೆಂಗಳೂರು- ಮಂಗಳೂರು ಎನ್.ಹೆಚ್- 75 ರಲ್ಲಿ ಕಳೆದ ಮಧ್ಯ ರಾತ್ರಿ ನಡೆದಿದೆ.
ಬೆಂಗಳೂರು-ಹೊಸಕೋಟೆ ಮೂಲದ ಗೌತಮ್(20) ಹಾಗೂ ದರ್ಶನ್(17) ಮೃತರು. 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಮೂಲತಃ ಹೊಸಕೋಟೆ ನಿವಾಸಿಗಳಾದ ಗೌತಮ್, ದರ್ಶನ್ ಅವರನ್ನೊಳಗೊಂಡ 12 ಕ್ಕೂ ಹೆಚ್ಚು ಜನರು ಹರ್ಷ ಟ್ರಾವೆಲ್ಸ್ ಗೆ ಸೇರಿದ ಬಸ್ ನಲ್ಲಿ ಪ್ರವಾಸಕ್ಕೆ ವಾರದ ಹಿಂದೆ ತೆರಳಿದ್ದರು.
ನಿನ್ನೆ ಧರ್ಮಸ್ಥಳ, ಮಂಗಳೂರು ಪ್ರವಾಸ ಮುಗಿಸಿ ವಾಪಸ್ ಹೊಸಕೋಟೆಗೆ ತೆರಳುತ್ತಿದ್ದರು. ಕಳೆದ ರಾತ್ರಿ ಮಾರ್ಗಮಧ್ಯೆ ಹಾಸನ-ಬೆಂಗಳೂರು- ಮಂಗಳೂರು ಎನ್.ಹೆಚ್- 75 ಹೈವೇ ಯಲ್ಲಿ ನಾಗಮಂಗಲ ತಾಲ್ಲೂಕಿನ ಕದಬಳ್ಳಿಯ ಬಳಿ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಹಳ್ಳಕೆ ಉರುಳಿಬಿದ್ದಿದೆ.
ಪರಿಣಾಮವಾಗಿ ದರ್ಶನ್ ಮತ್ತು ಗೌತಮ್ ಸ್ಥಳದಲ್ಲೇ ಸಾವನ್ನಪ್ಪಿದ ರೆ,10 ಕ್ಕೂ ಹೆಚ್ಚು ಜನರು ತೀವ್ರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಚುಂಚನಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಗೆ ದಾಖಲಿಸಲಾಗಿದೆ.
ಸುದ್ದಿತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದರು. ಈ ಸಂಬಂಧ ಬೆಳ್ಳೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.