ರಾಜ್ಯ

ಎರಡೂವರೆ ದಶಕದ ಬಳಿಕ ಮಾಜಿ ನಕ್ಸಲೀಯ ನಾಯಕ ವಿನೋದ್ ಬಂಧನ

Nagaraja AB

ರಾಯಚೂರು: ಕಳೆದ 25 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಮಾಜಿ ನಕ್ಸಲೀಯ ನಾಯಕನನ್ನು ಪೊಲೀಸರು ಬಂಧಿಸಿದ್ದಾರೆ.  

ವಿನೋದ ಅಲಿಯಾಸ್ ದೊಡ್ಡಪಾಳ್ಯ ನರಸಿಂಹಮೂರ್ತಿ ಬಂಧಿತ ನಕ್ಸಲೀಯನಾಗಿದ್ದಾನೆ. 1994, 2001ರಲ್ಲಿ 
ನಾಲ್ಕು ಪ್ರಕರಣಗಳಲ್ಲಿ ಭಾಗಿಯಾಗಿದ್ದ ವಿನೋದನಿಗಾಗಿ ಪೊಲೀಸರು ಹುಟುಕಾಟದಲ್ಲಿದ್ದರು. 

ಈತ ಹಲವು ಪ್ರಕರಣದಲ್ಲಿ ಭಾಗಿಯಾಗಿದ್ದ. ಇಲ್ಲಿಯ ವಿನೋದ ಅಲಿಯಾಸ್  ದೊಡ್ಡಪಾಳ್ಯ ಸ್ವರಾಜ್ ಇಂಡಿಯಾ ಪಕ್ಷದಲ್ಲೂ ಗುರುತಿಸಿಕೊಂಡಿದ್ದ. ೨೦೦೧ ರ ನಂತರ ತಲೆಮಾರಿಸಿಕೊಂಡಿದ್ದ. ಕರ್ನಾಟಕ ವಿಮೋಚನಾ ರಂಗದಲ್ಲಿದ್ದ ವಿನೋದ ಬಳಿಕ ತನ್ನ ಹೆಸರು ಬದಲಿಸಿಕೊಂಡಿದ್ದ. 

ಸ್ಥಳೀಯ ಸಾಕ್ಷಿ ಆಧಾರದಲ್ಲಿ ಈತನನ್ನು ಗುರುತಿಸಿದ ನಂತರ ಬಂಧನವಾಗಿದೆ. ಬಂಧಿತರನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ

SCROLL FOR NEXT