ಸಾಂದರ್ಭಿಕ ಚಿತ್ರ 
ರಾಜ್ಯ

ಬೆಂಗಳೂರು: ತುರ್ತು ಸಹಾಯವಾಣಿ ಇನ್ಮೇಲಿಂದ 100 ಅಲ್ಲ 112!

ಬೆಂಗಳೂರಿನ ಮೊಟ್ಟ ಮೊದಲ ಹೆಲ್ಫ್ ಲೈನ್ ನಂಬರ್  100 ಶೀಘ್ರವೇ ಬದಲಾಗಲಿಗಲಿದೆ.  ಆ್ಯಂಬುಲೆನ್ಸ್‌, ಪೊಲೀಸ್‌ ಸಹಾಯವಾಣಿ ಮತ್ತು ಅಗ್ನಿಶಾಮಕ ದಳ ಸೇರಿ ಇತರ ತುರ್ತು ಸೇವೆಗಳು ಮುಂದಿನ ದಿನಗಳಲ್ಲಿ ಒಂದೇ ದೂರವಾಣಿ ಸಂಖ್ಯೆ ಮೂಲಕ ದೊರೆಯಲಿವೆ. 

ಬೆಂಗಳೂರು: ಬೆಂಗಳೂರಿನ ಮೊಟ್ಟ ಮೊದಲ ಹೆಲ್ಫ್ ಲೈನ್ ನಂಬರ್  100 ಶೀಘ್ರವೇ ಬದಲಾಗಲಿದೆ.  ಆ್ಯಂಬುಲೆನ್ಸ್‌, ಪೊಲೀಸ್‌ ಸಹಾಯವಾಣಿ ಮತ್ತು ಅಗ್ನಿಶಾಮಕ ದಳ ಸೇರಿ ಇತರ ತುರ್ತು ಸೇವೆಗಳು ಮುಂದಿನ ದಿನಗಳಲ್ಲಿ ಒಂದೇ ದೂರವಾಣಿ ಸಂಖ್ಯೆ ಮೂಲಕ ದೊರೆಯಲಿವೆ. 

ಅಕ್ಟೋಬರ್ 30 ರಂದು ಸಂಜೆ 4 ಗಂಟೆಗೆ ಸಿಎಂ ಯಡಿಯೂರಪ್ಪ ಈ ಹೊಸ ಯೋಜನೆಗೆ ಚಾಲನೆ ನೀಡಲಿದ್ದಾರೆ.
ನಮ್ಮ100 ಮೊದಲಿಗೆ 2017 ಆರಂಭಗೊಂಡಿತು. ಈ ಸಂಖ್ಯೆ ಇನ್ನು ಮುಂದೆ ಬದಲಾಗಲಿದ್ದು, ಇಡೀ ರಾಜ್ಯದಲ್ಲಿ 112 ಹೊಸ ನಂಬರ್ ಚಾಲನೆಗೆ ಬರಲಿದೆ. ಆ ಯೋಜನೆ ಕಳೆದ 2 ವರ್ಷಗಳಿಂದ ಪೆಂಡಿಂಗ್ ಉಳಿದುಕೊಂಡಿತ್ತು. ಈಗ ಎಲ್ಲಾ ಜಿಲ್ಲೆಗಳಲ್ಲಿ ಚಾಲನೆಗೆ ಬರಲಿದೆ. ಬೆಂಗಳೂರಿನಲ್ಲಿ ಯಶಸ್ವಿಯಾದರೇ ಮೈಸೂರು ಮತ್ತು ಮಂಗಳೂರು ಜಿಲ್ಲೆಗೂ ವಿಸ್ತರಣೆಯಾಗಲಿದೆ.

ನಮ್ಮ100 ಕೇವಲ ನಗರಗಳನ್ನು ಮಾತ್ರ ಫೋಕಸ್ ಮಾಡುತ್ತಿತ್ತು, ಬೇರೆ ಜಿಲ್ಲೆಗಳಿಂದ ಕರೆಗಳು ಬಂದಾಗ ನಾವು ಸಂಬಂಧ ಪಟ್ಟ ವ್ಯಕ್ತಿಗಳಿಗೆ ಸಂಪರ್ಕಿಸುತ್ತಿದ್ದೆವು. ಈಗ ಸದ್ಯ ಪ್ರಮುಖ ಕೇಂದ್ರ ಬೆಂಗಳೂರಿನಲ್ಲಿದ್ದು ಕರೆಗಳು ಆಯಾಯಾ ಜಿಲ್ಲೆಗಳಿಗೆ ವರ್ಗಾವಣೆ ಮಾಡಲಾಗುವುದು ಎಂದು ಇಲ್ಲಾಕ್ಕಿಯಾ ಕರುಣಾಗರನ್ ಹೇಳಿದ್ದಾರೆ.

ಈ ಮೊದಲು ಕರೆ ವರ್ಗಾವಣೆ ಮಾಡಲು ಸುಮಾರು 8 ನಿಮಿಷ ಬೇಕಾಗಿತ್ತು, ಇನ್ನು ಮುಂದೆ ಕೇವಲ 5 ನಿಮಿಷಕ್ಕೆ ಕರೆ ಟ್ರಾನ್ಸ್ ಫರ್ ಮಾಡಬಹುದಾಗಿದೆ,

ಹೀಗಾಗಿ ಇನ್ಮುಂದೆ 100,101,102 ಹಾಗೂ 108 ಹಾಗೂ 118 ಸಂಖ್ಯೆ ಎಲ್ಲವೂ 112ಗೆ ರೀಡೈರೆಕ್ಟ್ ಆಗಲಿದೆ. ಈಗಾಗಲೇ ಈ ಯೋಜನೆಗೆ ದೆಹಲಿಯಲ್ಲಿ ಸೆಪ್ಟಂಬರ್ ತಿಂಗಳಿನಲ್ಲಿ ಹಾಗೂ ಉತ್ತರ ಪ್ರದೇಶದಲ್ಲಿ ಅಕ್ಟೋಬರ್ 26 ರಂದು ಚಾಲನೆ ದೊರೆತಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಸಂಘರ್ಷಕ್ಕೆ ಮಾನವೀಯತೆ ಬಲಿಯಾಗಬಾರದು': ಗಾಜಾ ಶಾಂತಿ ಯೋಜನೆಗೆ ಪ್ರಧಾನಿ ಮೋದಿ ಬೆಂಬಲ

T20 World Cup 2026: ವೆಸ್ಟ್ ಇಂಡೀಸ್ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ ಭರ್ಜರಿ ಜಯ; ಈ ಗೆಲುವಿಗಾಗಿ ಪರಿತಪಿಸುತ್ತಿತ್ತು ಭಾರತ!

ಕನ್ನಡ ಸಿನಿಮಾ ನಿರ್ದೇಶಕನ ಅಪಹರಿಸಿ, ಹಲ್ಲೆ: ನಟಿ ಸೇರಿದಂತೆ 11 ಜನರ ಬಂಧನ

ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಪಾಠ: ಕೇಂದ್ರ ಕ್ಷಮೆಯಾಚಿಸುತ್ತಿದ್ದಂತೆ NCERT ಪಠ್ಯ ಪುಸ್ತಕ ಬ್ಯಾನ್, ಪ್ರತಿಗಳನ್ನು ವಶಕ್ಕೆ ಪಡೆಯಲು ಸುಪ್ರೀಂ ಸೂಚನೆ

ಉರ್ದು ಭಾಷೆಯಲ್ಲಿ ಸರ್ಕಾರದ ಜಾಹೀರಾತು: ಸಿಎಂ ಸಿದ್ದರಾಮಯ್ಯ ಸಮರ್ಥನೆ ಹೇಗಿದೆ ಗೊತ್ತಾ?

SCROLL FOR NEXT