ರಾಜ್ಯ

ದೇಶದಲ್ಲಿ ಕಾನೂನಿಗಿಂತಲೂ ರಾಜಕೀಯ ದ್ವೇಷವೇ ಬಲಿಷ್ಟವಾಗಿದೆ: ವಿಡಿಯೋ ಸಂದೇಶದಲ್ಲಿ ಡಿ.ಕೆ.ಶಿವಕುಮಾರ್ 

Manjula VN

ನವದೆಹಲಿ: ದೇಶದಲ್ಲಿ ಕಾನೂನಿಗಿಂತಲೂ ರಾಜಕೀಯ ದ್ವೇಷವೇ ಬಲಿಷ್ಠವಾಗಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರು ಬುಧವಾರ ಹೇಳಿದ್ದಾರೆ. 

2 ವರ್ಷದ ಹಿಂದೆ ದೆಹಲಿ ಫ್ಲ್ಯಾಟ್ ಗಳಲ್ಲಿ ಸಿಕ್ಕ ರೂ.8.5 ಕೋಟಿ ಪ್ರಕರಣ ಸಂಬಂಧ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಪಿಎಂಎಲ್ಎ ವಿಶೇಷ ನ್ಯಾಯಾಲಯವು 10 ದಿನಗಳ ಕಾಲ ಇಡಿ ವಶಕ್ಕೆ ಒಪ್ಪಿಸಿ ಆದೇಶ ಹೊರಡಿಸಿದೆ. 

ದೆಹಲಿಯ ಇಡಿ ವಿಶೇಷ ನ್ಯಾಯಾಲಯದಲ್ಲಿ ಬುಧವಾರ ಸಂಜೆ ತೀರ್ಪಿಗಾಗಿ ಕಾದು ಕುಳಿತಿದ್ದ ಡಿ.ಕೆ.ಶಿವಕುಮಾರ್ ಅವರು ವಿಡಿಯೋ ಸಂದೇಶವನ್ನು ನೀಡಿದ್ದು, ವಿಡಿಯೋದಲ್ಲಿ ದೇಶದಲ್ಲಿಂದ ಕಾನೂನಿಗಿಂತಲೂ ರಾಜಕೀಯ ದ್ವೇಷವೇ ಬಲಿಷ್ಠವಾಗಿದೆ ಎಂದು ಹೇಳಿದ್ದಾರೆ. 

ಈ ವಿಡಿಯೋ ಸಂದೇಶವನ್ನು ಸ್ವತಃ ಡಿಕೆ. ಶಿವಕುಮಾರ್ ಅವರ ಸಾಮಾಜಿಕ ಜಾಲತಾಣದ ತಮ್ಮ ಅಧಿಕೃತ ಟ್ವಿಟರ್ ನಲ್ಲಿ ಪ್ರಕಟಿಸಿದ್ದಾರೆ. 

SCROLL FOR NEXT