ರಾಜ್ಯ

ಬಳ್ಳಾರಿ: ಸೆಲ್ಫಿ ಹುಚ್ಚಿಗೆ ಇಬ್ಬರು ಯುವಕರು ನೀರು ಪಾಲು

Lingaraj Badiger

ಬಳ್ಳಾರಿ: ತೆಪ್ಪದಲ್ಲಿ ಸಾಗುವಾಗ ಸೆಲ್ಫೀ ತೆಗೆದುಕೊಳ್ಳಲು ಹೋದ ಇಬ್ಬರು ಯುವಕರು ತೆಪ್ಪ ಮುಳುಗಿ ಮೃತಪಟ್ಟಿರುವ ಘಟನೆ ಹೊಸಪೇಟೆ ತಾಲ್ಲೂಕಿನ ಡಣಾಯಕನ ಕೆರೆ ಗ್ರಾಮದಲ್ಲಿ ಸಂಭವಿಸಿದೆ.

ಡಣಾಯಕನ ಕೆರೆ ಗ್ರಾಮದ ಇಬ್ಬರು ಯುವಕರು ತುಂಬಿ ಹರಿಯುತ್ತಿರುವ ತುಂಗಭದ್ರಾ ಜಲಾಶಯದ ಹಿನ್ನೀರಲ್ಲಿ ತೆಪ್ಪದಲ್ಲಿ ತೆರಳುತ್ತಿದ್ದರು. ಅದರಲ್ಲಿ ಕುಳಿತು ಮೊಬೈಲ್ ನಲ್ಲಿ ಸೆಲ್ಫಿ ತೆಗೆಯುವ ವೇಳೆ ತೆಪ್ಪ ಮುಳುಗಿ ನೀರು ಪಾಲಾಗಿದ್ದಾರೆ.

ಹರೀಶ್ ಮತ್ತು ಬಸವರಾಜ್ ನೀರು ಪಾಲಾದ ದುರ್ದೈವಿಗಳು. ವಿಷಯ ತಿಳಿಯುತ್ತಿದ್ದಂತೆ ಮೃತ ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿತ್ತು.

SCROLL FOR NEXT