ರಾಜ್ಯ

ಚುನಾವಣಾ ನೀತಿ ಸಂಹಿತೆ ಜಾರಿ- ಬಿಬಿಎಂಪಿ ಮೇಯರ್ ಚುನಾವಣೆ ಮುಂದೂಡಿಕೆ?

Raghavendra Adiga

ಬೆಂಗಳೂರು: ಜ್ಯಾದ್ಯಂತ ಏಕಾಏಕಿ ಘೋಷಣೆಯಾದ ಉಪಚುನಾವಣೆ ಹಾಗೂ ನೀತಿ ಸಂಹಿತೆಯಿಂದ ಬೆಂಗಳೂರು ನಗರದ ಮೇಯರ್ ಚುನಾವಣೆ ಅಡಕತ್ತರಿಯಲ್ಲಿ ಸಿಲುಕಿದೆ.

ಸೆ‌. 27 ರಂದು ನಿಗದಿಯಾಗಿರುವ ಮೇಯರ್ ಚುನಾವಣೆಯನ್ನು ಮುಂದೂಡಬೇಕು ಎಂದು ಬಿಬಿಎಂಪಿ ಆಡಳಿತ ಪಕ್ಷದ ನಾಯಕ ಅಬ್ದುಲ್ ವಾಜಿದ್ ಅವರು ನಗರ ಜಿಲ್ಲಾ ಚುನಾವಣಾಧಿಕಾರಿ ಬಿ.ಎಚ್.ಅನಿಲ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದ್ದಾರೆ‌ .

ಸುದ್ದಿಗೋ಼ಷ್ಠಿಯಲ್ಲಿ ಮಾಹಿತಿ ನೀಡಿದ ಅನಿಲ್ ಕುಮಾರ್, ಈ ಸಂಬಂಧ ರಾಜ್ಯ ಚುನಾವಣಾ ಆಯೋಗಕ್ಕೆ ಪತ್ರ ಬರೆಯುವುದಾಗಿ ತಿಳಿಸಿದರು.

SCROLL FOR NEXT