ರಾಜ್ಯ

ಕೊರೋನಾ ಕಂಟಕ: ಐತಿಹಾಸಿಕ ಕರಗ ಉತ್ಸವಕ್ಕೆ ಹೈಕೋರ್ಟ್ ತಡೆ

Vishwanath S

ಬೆಂಗಳೂರು: ಬೆಂಗಳೂರಿನ ತಿಗಳರಪೇಟೆಯ ಶ್ರೀ ಧರ್ಮರಾಯಸ್ವಾಮಿ ದೇವಾಲಯದಲ್ಲಿ ಏ. 8ರಂದು ನಡೆಯಬೇಕಿದ್ದ ಐತಿಹಾಸಿಕ ಕರಗ ಶಕ್ತ್ಯೋತ್ಸವಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. 

ಸಂಪ್ರದಾಯ ಮುರಿಯಬಾರದು ಎಂಬ ಕಾರಣಕ್ಕೆ ಕರಗ ಉತ್ಸವವನ್ನು ಕೇವಲ ಐದಾರು ಜನರು ಒಟ್ಟಾಗಿ ಸಾಂಕೇತಿಕವಾಗಿ ಆಚರಿಸಲು ರಾಜ್ಯ ಸರ್ಕಾರ ಇತ್ತೀಚೆಗೆ ಷರತ್ತುಬದ್ಧ ಅನುಮತಿ ನೀಡಿತ್ತು. 

ಬುಧವಾರ ( ಏ.8 ರಂದು) ನಡೆಯಬೇಕಿದ್ದು ಕೋವಿಡ್‌ –19 ಸೋಂಕು ಹರಡುವ ಭೀತಿಯಿಂದಾಗಿ ರದ್ದುಪಡಿಸಲಾಗಿದೆ.

ರಾಜ್ಯದಲ್ಲಿ  80 ವರ್ಷದ ವೃದ್ಧೆ ಸೇರಿದಂತೆ ಒಂದೇ ದಿನದಲ್ಲಿ 12 ಜನರಿಗೆ ಸೋಂಕು ತಗುಲಿದ್ದು, ಇದರಿಂದ ಸೋಂಕಿತರ ಸಂಖ್ಯೆ 175ಕ್ಕೇರಿಕೆಯಾಗಿದೆ.

SCROLL FOR NEXT