ಸಂಗ್ರಹ ಚಿತ್ರ 
ರಾಜ್ಯ

ಕೋವಿಡ್ -19: ಯುವಕರೇ ಎಚ್ಚರ, ರಾಜ್ಯದ ರೋಗಿಗಳ ಪೈಕಿ ಅರ್ಧದಷ್ಟು ಮಂದಿ 21-40 ವರ್ಷದೊಳಗಿನವರು!

ಜಗತ್ತಿನಾದ್ಯಂತ ತಲ್ಲಣ, ಆತಂಕ ಸೃಷ್ಟಿಸಿರುವ ಮಾರಕ ಕೋವಿಡ್- 19 ಸೋಂಕಿಗೆ ತುತ್ತಾದ ರಾಜ್ಯದ ರೋಗಿಗಳ ಪೈಕಿ ಅರ್ಧದಷ್ಟು ಮಂದಿ 21-40 ವರ್ಷದೊಳಗಿನವರು ಆಗಿದ್ದಾರೆ.

ಬೆಂಗಳೂರು: ಜಗತ್ತಿನಾದ್ಯಂತ ತಲ್ಲಣ, ಆತಂಕ ಸೃಷ್ಟಿಸಿರುವ ಮಾರಕ ಕೋವಿಡ್- 19 ಸೋಂಕಿಗೆ ತುತ್ತಾದ ರಾಜ್ಯದ ರೋಗಿಗಳ ಪೈಕಿ ಅರ್ಧದಷ್ಟು ಮಂದಿ 21-40 ವರ್ಷದೊಳಗಿನವರು ಆಗಿದ್ದಾರೆ. ಕೊರೋನಾವೈರಸ್ ನಿಂದ ವಯಸ್ಸಾದವರು ಹೆಚ್ಚಾಗಿ ಅಪಾಯಕ್ಕೊಳಗಾಗುತ್ತಾರೆ ಎಂಬ ಮಾತುಗಳು ಸುಳ್ಳು ಎಂಬುದು ಇದರಿಂದ ಸ್ಪಷ್ಟವಾಗುತ್ತಿದೆ. 

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ವಿಶ್ಲೇಷಿಸಿದಾಗ, ಒಟ್ಟಾರೇ ರಾಜ್ಯದಲ್ಲಿನ 163 ಪಾಸಿಟಿವ್ ಕೇಸ್ ಗಳ ಪೈಕಿಯಲ್ಲಿ ಶೇ. 50 ರಷ್ಟು ಅಂದರೆ 81 ಪ್ರಕರಣಗಳು ಈ ಗುಂಪಿಗೆ ಸೇರಿದವರಾಗಿದ್ದಾರೆ. ಈ ಮಾಹಿತಿಯನ್ನು ಇನ್ನೂ ವಿಶ್ಲೇಷಿಸಿಲ್ಲ, ಸಾರ್ವಜನಿಕರಿಗೆ ತಿಳಿಸಿಲ್ಲ ಎಂದು ಆರೋಗ್ಯ ಇಲಾಖೆ  ಅಧಿಕಾರಿಯೊಬ್ಬರು ಹೇಳಿದ್ದಾರೆ.

ಸೋಂಕು ದೃಢಪಟ್ಟಿರುವ ಶೇ. 27 ರಷ್ಟು ಪ್ರಕರಣಗಳಲ್ಲಿ 31ರಿಂದ 40 ವರ್ಷದೊಳಗಿನವರಾಗಿದ್ದಾರೆ. ಶೇ. 23 ರಷ್ಟು  ಕೇಸ್ ಗಳಲ್ಲಿ 21 ರಿಂದ 30 ವರ್ಷದೊಳಗಿನವರು, ಶೇ. 9 ರಷ್ಟು ರೋಗಿಗಳು 20 ವರ್ಷದವರು ಆಗಿದ್ದಾರೆ. ಶೇ. 24 ರಷ್ಟು ಕೇಸ್ ಗಳಲ್ಲಿ 41 ರಿಂದ 61 ವರ್ಷದೊಳಗಿನವರಾಗಿದ್ದಾರೆ.

ಇದಲ್ಲದೆ, 13 ರಿಂದ 20 ವರ್ಷದೊಳಗಿನ 12 ಮಂದಿಯಲ್ಲಿ ಕೊರೋನಾ ಪಾಸಿಟಿವ್ ಕಂಡುಬಂದಿದೆ. ಶಿಶು ಸೇರಿದಂತೆ  10 ವರ್ಷದೊಳಗಿನ ಮೂವರಿಗೆ ಸೋಂಕು ತಗುಲಿದೆ.

ರಾಜ್ಯದಲ್ಲಿನ ಕೋವಿಡ್-19 ಪ್ರಕರಣಗಳಲ್ಲಿ  31-40 ವರ್ಷ ವಯಸ್ಸಿನವರಾಗಿದ್ದು, ಇದಕ್ಕೆ ಕಾರಣ ಗುರುತಿಸಲು ಯಾರಿಂದಲೂ ಸಾಧ್ಯವಿಲ್ಲ, ಇತರರಿಗಿಂತ ಯುವಕರೇ ಹೆಚ್ಚಾಗಿ ಈ ಸೋಂಕಿಗೆ ತುತ್ತಾಗುತ್ತಿದ್ದಾರೆ ಎಂಬುದಾಗಿ ವರ್ಗೀಕರಿಸಬಹುದಾಗಿದೆ ಎಂದು ತಜ್ಞರು ಹೇಳುತ್ತಾರೆ. 

31 ವರ್ಷದಿಂದ 40 ವರ್ಷದೊಳಗಿನವರು ಹೆಚ್ಚಾಗಿ ವಿದೇಶ ಪ್ರವಾಸ ಕೈಗೊಳ್ಳುವುದು, ವಿಶ್ರಾಂತಿಗಿಂತಲೂ ಮೊಬೈಲ್ ಗೆ ಹೆಚ್ಚಾಗಿ ಅವಲಂಬಿತರಾಗಿರುವುದು ಇದಕ್ಕೆ ಕಾರಣಗಳಲ್ಲಿ ಒಂದಾಗಿದೆ ಎನ್ನುತ್ತಾರೆ ಮಣಿಪಾಲ್ ಆಸ್ಪತ್ರೆ ಸಮೂಹದ ಮುಖ್ಯಸ್ಥ ಡಾ. ಹೆಚ್. ಸುದರ್ಶನ್ ಬಲ್ಲಾಳ್ . 

ಧೂಮಪಾನ, ಮಧ್ಯಪಾನ, ಮಧುಮೇಹ, ಅಧಿಕ ಒತ್ತಡ ಮತ್ತಿತರ ಕಾರಣಗಳಿಂದಲೂ ಯುವಕರು ಹೆಚ್ಚಾಗಿ ಕೊರೋನಾ ಸೋಂಕಿಗೆ ತುತ್ತಾಗಲು ಕಾರಣವಾಗಿರಬಹುದೆಂದು ರಾಜೀವ್ ಗಾಂಧಿ ಎದೆ ರೋಗಗಳ ಕಾಯಿಲೆ ಸಂಸ್ಥೆ ನಿರ್ದೇಶಕ ಡಾ. ಸಿ. ಎನ್. ನಾಗರಾಜ್ ಹೇಳಿದ್ದಾರೆ. 

ರಾಜ್ಯದಲ್ಲಿನ ಕೋವಿಡ್ -19 ರೋಗಿಗಳ ಪೈಕಿಯಲ್ಲಿ 24 ಮಂದಿ  (ಶೇ. 14.7 ) 61ರಿಂದ 70 ವರ್ಷದೊಳಗಿನವರಾಗಿದ್ದಾರೆ. 4 (ಶೇ. 2.5) 71ರಿಂದ 80 ವರ್ಷದೊಳಗಿನವರಾಗಿದ್ದಾರೆ. ಈವರೆಗೂ 81 ವರ್ಷಕ್ಕೂ ಮೇಲ್ಪಟ್ಟ ಯಾವುದೇ ವ್ಯಕ್ತಿಯಲ್ಲೂ ಸೋಂಕು ಪತ್ತೆಯಾಗಿಲ್ಲ, ಸಾವನ್ನಪ್ಪಿದ್ದ ವೃದ್ಧರಲ್ಲಿ ಹೆಚ್ಚಾಗಿ ಮಧುಮೇಹ, ಕಿಡ್ನಿ, ಹೃದಯ ಸಂಬಂಧಿತ ಕಾಯಿಲೆಗಳಿಂದ ಬಳಲುತ್ತಿದ್ದರು ಎಂಬುದಾಗಿ ಡಾ. ನಾಗರಾಜ್ ತಿಳಿಸಿದ್ದಾರೆ. 

ಕೊರೋನಾವೈರಸ್ ನಿಂದ ರಾಜ್ಯದಲ್ಲಿ ಮೃತಪಟ್ಟವರು 60 ವರ್ಷಕ್ಕಿಂತ ಮೇಲ್ಪಟ್ಟವರು ಆಗಿದ್ದಾರೆ. ಇದರರ್ಥ ಯುವಕರು ಹೆಚ್ಚು ಜವಾಬ್ದಾರಿಯುತವಾಗಿರಬೇಕು, ಏಕೆಂದರೆ ಅವರೊಂದಿಗೆ ವಾಸಿಸುವ ವಯಸ್ಸಾದವರಿಗೆ ವೈರಸ್ ಹರಡುವ ಸಾಧ್ಯತೆಗಳು ಹೆಚ್ಚು ಎಂದು ಪ್ರೊಫೆಸರ್ ಅನಂತ್ ಬಾನ್ ಅಭಿಪ್ರಾಯಪಟ್ಟಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT