ರಾಜ್ಯ

ರಾಜ್ಯಕ್ಕೆ ಸಿಹಿ ಸುದ್ದಿ: ಕೊರೋನಾ ಸಂಕಷ್ಟದ ಸಮಯದಲ್ಲಿ 1,536 ಕೋಟಿ ರೂ. ಜಿಎಸ್ ಟಿ ಬಾಕಿ ಬಿಡುಗಡೆ

Vishwanath S

ಬೆಂಗಳೂರು: ಕೊರೋನಾ ಸೋಂಕಿನಿಂದ ತತ್ತರಿಸಿರುವ ರಾಜ್ಯಕ್ಕೆ ಕೇಂದ್ರ ದಿಂದ ಸಿಹಿ ಸುದ್ದಿ ಬಂದಿದೆ ರಾಜ್ಯದ ಪಾಲಿನ 1,536 ಕೋಟಿ ರೂ. ಜಿಎಸ್ ಟಿ ಬಾಕಿ ಹಣ ಬಿಡುಗಡೆ ಮಾಡಿದೆ. 

ಈ ಕುರಿತು ಗೃಹ ಸಚಿವ ಬಸವರಾಜ ಬೊಮ್ಮಾಯಿ,ಸುದ್ದಿಗಾರರ ಜೊತೆ ಮಾತನಾಡಿ ನವೆಂಬರ್ ತಿಂಗಳ ಬಾಕಿ 1536 ಕೋಟಿ ರುಪಾಯಿ ಹಣವನ್ನು ಕೇಂದ್ರ ಬಿಡುಗಡೆ ಮಾಡಿದೆ ಎಂದು ತಿಳಿಸಿದ್ದಾರೆ.

ಇನ್ನೂ ಡಿಸೆಂಬರ್, ಹಾಗೂ ಜನವರಿ ತಿಂಗಳ ರಾಜ್ಯದ ಪಾಲಿನ ಸುಮಾರು 2,800 ಕೋಟಿ ರೂ. ಜಿಎಸ್ ಟಿ ಹಣವನ್ನು ಕೂಡಲೇ ಬಿಡುಗಡೆ ಮಾಡುವಂತೆ ರಾಜ್ಯ ಕೇಂದ್ರಕ್ಕೆ ಮನವಿ ಮಾಡಿದೆ ಎಂದೂ ಸಚಿವ ಬೊಮ್ಮಾಯಿ ಹೇಳಿದರು.

SCROLL FOR NEXT