ರಾಜ್ಯ

ಕಡಬ: ಅಪರಿಚಿತನೊಡನೆ ಒಟಿಪಿ ಹಂಚಿಕೊಂಡ ಬ್ಯಾಂಕ್ ಗ್ರಾಹಕನಿಗೆ 99,900 ರೂ ದೋಖಾ!

ಅಪರಿಚಿತ ವ್ಯಕ್ತಿಯೊಬ್ಬ ಬ್ಯಾಂಕ್ ಗ್ರಾಹಕನೊಬ್ಬನಿಗೆ ಕರೆ ಮಾಡಿ ಒಟಿಪಿ ಸಂಖ್ಯೆ ಪಡೆದು 99,900 ರೂ. ದೋಚಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನಲ್ಲಿ ನಡೆದಿದೆ.

ಕಡಬ: ಅಪರಿಚಿತ ವ್ಯಕ್ತಿಯೊಬ್ಬ ಬ್ಯಾಂಕ್ ಗ್ರಾಹಕನೊಬ್ಬನಿಗೆ ಕರೆ ಮಾಡಿ ಒಟಿಪಿ ಸಂಖ್ಯೆ ಪಡೆದು 99,900 ರೂ. ದೋಚಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನಲ್ಲಿ ನಡೆದಿದೆ.

ತಾಲ್ಲೂಕಿನ ಕೋಡಿಂಬಳ ಗ್ರಾಮದ ಬೆದ್ರಾಜೆ ಮೂಲದ ಧರಣೇಂದ್ರ ಜೈನ್ ವಂಚನೆಗೊಳಗಾದ ವ್ಯಕ್ತಿ. ಕಡಬ ದುರ್ಗಾಂಬಿಕಾ ದೇವಾಲಯ ವ್ಯವಸ್ಥಾಪನಾ ಸಮಿತಿಯ ಮಾಜಿ ಸದಸ್ಯರೂ ಆಗಿದ್ದ ಜೈನ್ ವಿಜಯಾ ಬ್ಯಾಂಕ್ ಖಾತೆದಾರರಾಗಿದ್ದು ಇದೇ ಖಾತೆಯಿಂದ ಬಹುದೊಡ್ಡ ಮೊತ್ತದ ಹಣ ಇದೀಗ ಕಳ್ಳನ ಪಾಲಾಗಿದೆ.

ಶುಕ್ರವಾರ ಸಂಜೆ ವ್ಯಕ್ತಿಯೊಬ್ಬರಿಂದ ಜೈನ್ ಕರೆಯನ್ನು ಸ್ವೀಕರಿಸಿದ್ದಾರೆ. ಏರ್‌ಟೆಲ್ ಗ್ರಾಹಕ ಸಹಾಯ ಕೇಂದ್ರದುದ್ಯೋಗಿ ಎಂದು ಎಂದು ಪರಿಚಯಿಸಿಕೊಂಡ ಅಪರಿಚಿತ ವಂಚಕ ಕನ್ನಡದಲ್ಲೇ ಮಾತನಾಡಿದ್ದ. ಫೋನ್ ಸಂಖ್ಯೆಯನ್ನು ಸಕ್ರಿಯಗೊಳಿಸಲು ಅತ ಒಟಿಪಿ ಸಂಖ್ಯೆಯನ್ನು ಕೇಳಿದ್ದ.

ಒಟಿಪಿ ಸಂಖ್ಯೆ ಸಿಕ್ಕಿದ ಕೂಡಲೇ ಜೈನ್ ತನ್ನ ಮಗನ ಸಹಾಯದಿಂದ ಕರೆ ಮಾಡಿದವರ ಸಂಖ್ಯೆಗೆ ಕಳುಹಿದ್ದಾರೆ. ಆದರೆ ಕೆಲವೇ ನಿಮಿಷಗಳಲ್ಲಿ ವಿಜಯ ಬ್ಯಾಂಕಿನಲ್ಲಿರುವ ಜೈನ್ ಅವರ ಖಾತೆಯಲ್ಲಿ  50,000 ರೂ. ವಿತ್ ಡ್ರಾ ಆಗಿತ್ತು. ಅಷ್ಟು ಮಾತ್ರವಲ್ಲ  ಶನಿವಾರ ಮುಂಜಾನೆ 25,000 ಮತ್ತು 24,900 ರೂ. ಸಹ ಅದೇ ಖಾತೆಯಿಂದ ಡೆಬಿಟ್ ಆಗಿದೆ.

ಈ ಸಂಬಂಧ ಜೈನ್  ಏಪ್ರಿಲ್ 13 ರ ಸೋಮವಾರ ಕಡಬ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದೇ ರೀತಿಯ ಘಟನೆಯಲ್ಲಿ, ಕಡಬದ  ಮಹಿಳೆಯೊಬ್ಬರಿಗೆ ಗೂಗಲ್ ಪೇ ಮೂಲಕ 6,000 ರೂ.ಗಳನ್ನು ಕಳುಹಿಸಲು ಕೇಳಲಾಯಿತು ಮತ್ತು ನಂತರ ವಂಚನೆ ನಡೆಸಲಾಗಿದೆಎಂದು ತಿಳಿದುಬಂದಿದೆ. ಈ ಕುರಿತು ಸಹ ಇದೇ ಠಾಣೆಯಲ್ಲಿ ದೂರು ದಾಖಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ದೆಹಲಿ ಸಭೆ ಬಳಿಕ ಬೆಂಗಳೂರಿನಲ್ಲಿ ಶಕ್ತಿ ಪ್ರದರ್ಶನಕ್ಕೆ ಸಿದ್ದರಾಮಯ್ಯ ಸಜ್ಜು: ಬೆಂಬಲಿಗರ ಜೊತೆ ಮಹತ್ವದ ಸಭೆ, ಹೆಚ್ಚಿದ ಕುತೂಹಲ

ಹೈಕಮಾಂಡ್ ಸೂಚನೆಗೆ ಮಣಿದ ಸಿದ್ದರಾಮಯ್ಯ: ಮುಖ್ಯಮಂತ್ರಿ ಸ್ಥಾನ ತ್ಯಜಿಸಲು ಸಮ್ಮತಿ; ಕಾಂಗ್ರೆಸ್ ಪವರ್ ಶಿಫ್ಟ್‌ಗೆ ಕೌಂಟ್‌ಡೌನ್ ಶುರು, ಡಿಕೆಶಿಗೆ ಸಿಎಂ ಪಟ್ಟ..?

ಬೆಂಗಳೂರಿಗೂ ಎಂಟ್ರಿ ಕೊಟ್ಟಿತೇ ಮಹಾಮಾರಿ ಎಬೋಲಾ? ಆಫ್ರಿಕಾದಿಂದ ಬಂದ ಮಹಿಳೆಯಲ್ಲಿ ಸೋಂಕಿನ ಲಕ್ಷಣ ಪತ್ತೆ, ಆರೋಗ್ಯ ಇಲಾಖೆ ಹೈ ಅಲರ್ಟ್

CMRL ಹಣ ಅಕ್ರಮ ವರ್ಗಾವಣೆ ಪ್ರಕರಣ: ಕೇರಳ ಮಾಜಿ ಸಿಎಂ ಪಿಣರಾಯಿ ವಿಜಯನ್ ನಿವಾಸದ ಮೇಲೆ ED ದಾಳಿ..!

IPL 2026: ಗುಜರಾತ್ ವಿರುದ್ಧ ಭರ್ಜರಿ ಗೆಲುವು; ಸತತ 2ನೇ ಬಾರಿ ಫೈನಲ್ಸ್ ಪ್ರವೇಶಿಸಿದ RCB

SCROLL FOR NEXT