ರಾಜ್ಯ

ಕಡಬ: ಅಪರಿಚಿತನೊಡನೆ ಒಟಿಪಿ ಹಂಚಿಕೊಂಡ ಬ್ಯಾಂಕ್ ಗ್ರಾಹಕನಿಗೆ 99,900 ರೂ ದೋಖಾ!

ಅಪರಿಚಿತ ವ್ಯಕ್ತಿಯೊಬ್ಬ ಬ್ಯಾಂಕ್ ಗ್ರಾಹಕನೊಬ್ಬನಿಗೆ ಕರೆ ಮಾಡಿ ಒಟಿಪಿ ಸಂಖ್ಯೆ ಪಡೆದು 99,900 ರೂ. ದೋಚಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನಲ್ಲಿ ನಡೆದಿದೆ.

ಕಡಬ: ಅಪರಿಚಿತ ವ್ಯಕ್ತಿಯೊಬ್ಬ ಬ್ಯಾಂಕ್ ಗ್ರಾಹಕನೊಬ್ಬನಿಗೆ ಕರೆ ಮಾಡಿ ಒಟಿಪಿ ಸಂಖ್ಯೆ ಪಡೆದು 99,900 ರೂ. ದೋಚಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನಲ್ಲಿ ನಡೆದಿದೆ.

ತಾಲ್ಲೂಕಿನ ಕೋಡಿಂಬಳ ಗ್ರಾಮದ ಬೆದ್ರಾಜೆ ಮೂಲದ ಧರಣೇಂದ್ರ ಜೈನ್ ವಂಚನೆಗೊಳಗಾದ ವ್ಯಕ್ತಿ. ಕಡಬ ದುರ್ಗಾಂಬಿಕಾ ದೇವಾಲಯ ವ್ಯವಸ್ಥಾಪನಾ ಸಮಿತಿಯ ಮಾಜಿ ಸದಸ್ಯರೂ ಆಗಿದ್ದ ಜೈನ್ ವಿಜಯಾ ಬ್ಯಾಂಕ್ ಖಾತೆದಾರರಾಗಿದ್ದು ಇದೇ ಖಾತೆಯಿಂದ ಬಹುದೊಡ್ಡ ಮೊತ್ತದ ಹಣ ಇದೀಗ ಕಳ್ಳನ ಪಾಲಾಗಿದೆ.

ಶುಕ್ರವಾರ ಸಂಜೆ ವ್ಯಕ್ತಿಯೊಬ್ಬರಿಂದ ಜೈನ್ ಕರೆಯನ್ನು ಸ್ವೀಕರಿಸಿದ್ದಾರೆ. ಏರ್‌ಟೆಲ್ ಗ್ರಾಹಕ ಸಹಾಯ ಕೇಂದ್ರದುದ್ಯೋಗಿ ಎಂದು ಎಂದು ಪರಿಚಯಿಸಿಕೊಂಡ ಅಪರಿಚಿತ ವಂಚಕ ಕನ್ನಡದಲ್ಲೇ ಮಾತನಾಡಿದ್ದ. ಫೋನ್ ಸಂಖ್ಯೆಯನ್ನು ಸಕ್ರಿಯಗೊಳಿಸಲು ಅತ ಒಟಿಪಿ ಸಂಖ್ಯೆಯನ್ನು ಕೇಳಿದ್ದ.

ಒಟಿಪಿ ಸಂಖ್ಯೆ ಸಿಕ್ಕಿದ ಕೂಡಲೇ ಜೈನ್ ತನ್ನ ಮಗನ ಸಹಾಯದಿಂದ ಕರೆ ಮಾಡಿದವರ ಸಂಖ್ಯೆಗೆ ಕಳುಹಿದ್ದಾರೆ. ಆದರೆ ಕೆಲವೇ ನಿಮಿಷಗಳಲ್ಲಿ ವಿಜಯ ಬ್ಯಾಂಕಿನಲ್ಲಿರುವ ಜೈನ್ ಅವರ ಖಾತೆಯಲ್ಲಿ  50,000 ರೂ. ವಿತ್ ಡ್ರಾ ಆಗಿತ್ತು. ಅಷ್ಟು ಮಾತ್ರವಲ್ಲ  ಶನಿವಾರ ಮುಂಜಾನೆ 25,000 ಮತ್ತು 24,900 ರೂ. ಸಹ ಅದೇ ಖಾತೆಯಿಂದ ಡೆಬಿಟ್ ಆಗಿದೆ.

ಈ ಸಂಬಂಧ ಜೈನ್  ಏಪ್ರಿಲ್ 13 ರ ಸೋಮವಾರ ಕಡಬ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದೇ ರೀತಿಯ ಘಟನೆಯಲ್ಲಿ, ಕಡಬದ  ಮಹಿಳೆಯೊಬ್ಬರಿಗೆ ಗೂಗಲ್ ಪೇ ಮೂಲಕ 6,000 ರೂ.ಗಳನ್ನು ಕಳುಹಿಸಲು ಕೇಳಲಾಯಿತು ಮತ್ತು ನಂತರ ವಂಚನೆ ನಡೆಸಲಾಗಿದೆಎಂದು ತಿಳಿದುಬಂದಿದೆ. ಈ ಕುರಿತು ಸಹ ಇದೇ ಠಾಣೆಯಲ್ಲಿ ದೂರು ದಾಖಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT