ರಾಜ್ಯ

ಲಾಕ್ ಡೌನ್ ಎಫೆಕ್ಟ್:7 ಕಿ.ಮೀ ನಡೆದುಕೊಂಡು ಬೆಂಗಳೂರಿಗೆ ಬಂದು ದಂತ ವೈದ್ಯೆ ಕ್ಲಿನಿಕ್ ನಲ್ಲಿ ಮಗು ಹೆತ್ತ ತಾಯಿ!

Sumana Upadhyaya

ಬೆಂಗಳೂರು:ಕೊರೋನಾ ಲಾಕ್ ಡೌನ್ ಹಲವರಿಗೆ ಹಲವು ರೀತಿಯಲ್ಲಿ ಸಂಕಷ್ಟ ತಂದೊಡ್ಡಿದೆ. ಅದರಲ್ಲಿ ಬಹಳ ತೊಂದರೆಯಾಗುವುದು ಅನಾರೋಗ್ಯವಿಲ್ಲದಿರುವವರಿಗೆ ಆಸ್ಪತ್ರೆಗೆ ಹೋಗಲು. ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಳ್ಳಲು ಸಾಧ್ಯವಾಗದೆ ಪ್ರಾಣ ಕಳೆದುಕೊಂಡ ಪ್ರಸಂಗಗಳಿವೆ.

ಹಲವು ಜನರಿಗೆ ಈ ಸಂದರ್ಭದಲ್ಲಿ ವೈದ್ಯರು ನಿಜವಾದ ದೇವರಂತೆ ಕಂಡಿದ್ದು ಸುಳ್ಳಲ್ಲ. ಇಂದು ಒಬ್ಬ ಗರ್ಭಿಣಿಗೆ ಇದೇ ರೀತಿ ಆಗಿದೆ. ಹೆರಿಗೆ ಬೇನೆ ಲಕ್ಷಣ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಗರ್ಭಿಣಿ ಮತ್ತು ಆಕೆಯ ಪತಿ ಯಾವುದಾದರೂ ಆಸ್ಪತ್ರೆಯೊ, ಕ್ಲಿನಿಕ್ ಸಿಗಬಹುದು ಎಂದು 5ರಿಂದ 7 ಕಿಲೋ ಮೀಟರ್ ನಡೆದುಕೊಂಡು ಬೆಂಗಳೂರಿಗೆ ಬಂದಿದ್ದಾರೆ. ಕೊನೆಗೆ ಒಂದು ಡೆಂಟಲ್ ಕ್ಲಿನಿಕ್ ತೆರೆದಿರುವುದು ಅವರ ಕಣ್ಣಿಗೆ ಕಾಣಿಸಿತು.

ಅಲ್ಲಿಗೆ ಬಂದು ದಂತ ವೈದ್ಯೆ ಡಾ.ರಮ್ಯ ಅವರ ಬಳಿ ಸಹಾಯ ಕೋರಿದ್ದಾರೆ. ಅವರನ್ನು ಕರೆಸಿಕೊಂಡ ವೈದ್ಯೆ ಮಹಿಳೆಯ ಹೆರಿಗೆಗೆ ನೆರವಾದರು.

ಶಿಶು ಜನನವಾದ ಕೂಡಲೇ ಅಳುವುದಾಗಲಿ, ಬೇರೆ ಚಲನವಲನದ ಮೂಲಕ ಪ್ರತಿಕ್ರಿಯೆ ನೀಡಲಿಲ್ಲವಂತೆ. ಹೀಗಾಗಿ ತೀರಿಹೋಗಿದೆ ಎಂದು ಭಾವಿಸಿದ್ದಾರೆ. ಆದರೆ ಸ್ವಲ್ಪ ಹೊತ್ತಿನ ಬಳಿಕ ಮಗು ಜೀವಂತವಿದೆ ಎಂದು ಗೊತ್ತಾಯಿತು. ಕೂಡಲೇ ವೈದ್ಯೆ ಬೇರೊಂದು ಆಸ್ಪತ್ರೆಗೆ ತಾಯಿ-ಮಗುವನ್ನು ಕಳುಹಿಸುವ ವ್ಯವಸ್ಥೆ ಮಾಡಿದರು.

SCROLL FOR NEXT