ಕಾಡಾನೆ ರಕ್ಷಣೆ 
ರಾಜ್ಯ

ಚಾಮರಾಜನಗರ: ಆಕಸ್ಮಿಕವಾಗಿ ತೆರೆದ ಬಾವಿಗೆ ಬಿದ್ದಿದ್ದ ಕಾಡಾನೆ ರಕ್ಷಣೆ

ಮೇವು ನೀರು ಹರಸಿ ಕಾಡಿನಿಂದ ಅರಣ್ಯದಂಚಿನ ಜಮೀನಿಗೆ ಬಂದು ಬಾವಿಗೆ ಬಿದ್ದಿದ್ದ ಕಾಡಾನೆಯನ್ನು ಸುರಕ್ಷಿತವಾಗಿ ಮೇಲಕ್ಕೆತ್ತುವ ಮೂಲಕ ಮಲೈ ಮಹಾದೇಶ್ವರಸ್ವಾಮಿ ವನ್ಯಜೀವಿ ವಲಯದ ಅರಣ್ಯ ಇಲಾಖಾಧಿಕಾರಿಗಳು ಯಶಸ್ವಿಯಾಗಿದ್ದಾರೆ

ಚಾಮರಾಜನಗರ: ಮೇವು ನೀರು ಹರಸಿ ಕಾಡಿನಿಂದ ಅರಣ್ಯದಂಚಿನ ಜಮೀನಿಗೆ ಬಂದು ಬಾವಿಗೆ ಬಿದ್ದಿದ್ದ ಕಾಡಾನೆಯನ್ನು ಸುರಕ್ಷಿತವಾಗಿ ಮೇಲಕ್ಕೆತ್ತುವ ಮೂಲಕ ಮಲೈ ಮಹಾದೇಶ್ವರಸ್ವಾಮಿ ವನ್ಯಜೀವಿ ವಲಯದ ಅರಣ್ಯ ಇಲಾಖಾಧಿಕಾರಿಗಳು ಯಶಸ್ವಿಯಾಗಿದ್ದಾರೆ

ರಾಜ್ಯದ ಗಡಿ ಜಿಲ್ಲೆ ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಮಲೈ ಮಹಾದೇಶ್ವರಸ್ವಾಮಿ ವನ್ಯ ಜೀವಿ ಧಾಮದ ವಲಯದ ವ್ಯಾಪ್ತಿಯಲ್ಲಿ ಬರುವ ಚೆನ್ನೇಗೌಡನದೊಡ್ಡಿ ಗ್ರಾಮದ ಗೋವಿಂದ ಎಂಬುವವರ ಜಮೀನಿನಲ್ಲಿದ್ದ ತೆರೆದ ಬಾವಿಗೆ ಹತ್ತದಿನೈದು ವರ್ಷದ ಆಸುಪಾಸಿನ ಗಂಡಾನೆಯೊಂದು ನೀರು ಕುಡಿಯಲು ಬಂದು ಬುಧವಾರ ರಾತ್ರಿ ಆಕಸ್ಮಿಕವಾಗಿ ಕಾಲುಜಾರಿ ಬಿದ್ದಿದೆ.

 ಇಂದು ಬೆಳಗ್ಗೆ ಮಾಲೀಕ ಗೋವಿಂದ ಜಮೀನಿಗೆ ತೆರಳಿ ಆಕಸ್ಮಿಕವಾಗಿ ಬಾವಿಯನ್ನು ವೀಕ್ಷಿಸಿದಾಗ ನೀರಿನಲ್ಲಿ ಬಿದ್ದಿರುವ ಗಂಡಾನೆಯು ಮೇಲೆ ಬರಲು ಹರಸಾಹಸಪಡುತ್ತಿತ್ತು. ಇದನ್ನರಿತ ಗೋವಿಂದ ಅರಣ್ಯ ಇಲಾಖಾಧಿಕಾರಿಗಳ ಗಮನಕ್ಕೆ ತಂದಾಗ ತಕ್ಷಣ ಮಲೈ ಮಹಾದೇಶ್ವರಸ್ವಾಮಿ ವನ್ಯಜೀವಿ ಧಾಮದ ವಲಯ ಅರಣ್ಯಾಧಿಕಾರಿ ಹಾಗೂ ತಂಡ ಜೆಸಿಬಿ ಯಂತ್ರದ ಮೂಲಕ ಸ್ಥಳಕ್ಕಾಗಮಿಸಿ, ಆನೆ ಮೇಲೆ ಬರಲು ಜೆಸಿಬಿ ಯಂತ್ರದ ಮೂಲಕ ದಾರಿ ಮಾಡಿಕೊಟ್ಟಿದ್ದಾರೆ. 

ಬದುಕಿತು ಬಡಜೀವವೆ ಎಂಬಂತೆ ಆನೆ ಕೊನೆಗೂ ಪ್ರಯಾಸ ಪಟ್ಟು ಅರಣ್ಯ ಇಲಾಖಾಧಿಕಾರಿಗಳು ಆನೆ ಮೇಲೆರಲು ಮಾಡಿದ ದಾರಿಯಲ್ಲಿ ಪ್ರಯಾಸಪಟ್ಟು ಮೇಲಕ್ಕೇರಿ ಕಾಡಿನತ್ತ ಪ್ರಯಾಣ ಬೆಳೆಸಿತು. ಆನೆಯನ್ನು ರಕ್ಷಿಸಿದ ವಲಯಾರಣ್ಯಾಧಿಕಾರಿ ಸುಂದರ್ ಹಾಗೂ ತಂಡಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ವರದಿ: ಗೂಳಿಪುರ ನಂದೀಶ. ಎಂ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಶ್ ಮಾಫಿ ಸಾಕ್ಷಿ ಅರ್ಜಿ ಅಂಗೀಕರಿಸಿದ ಕೋರ್ಟ್; 'ದಾಸ'ನಿಗೆ ಬಿಗ್ ಶಾಕ್!

ನಾಳೆ ಜಗತ್ತಿನಾದ್ಯಂತ ಯಶ್ ನಟನೆಯ 'Toxic' ಚಿತ್ರ ಬಿಡುಗಡೆ; ಇಂದು ದಿಢೀರ್ ಕೋರ್ಟ್ ಮೆಟ್ಟಿಲೇರಿದ ನಿರ್ಮಾಪಕ!

ಬೆಂಗಳೂರು: ಸಿಗ್ನಲ್‌ನಲ್ಲಿ ನಿಂತಿದ್ದ ಬೈಕ್‌ಗೆ ವೇಗವಾಗಿ ಬಂದ ಕಾರು ಡಿಕ್ಕಿ, ಹೇರ್ ಸ್ಟೈಲಿಸ್ಟ್ ಸಾವು; Video

BPSC ಪರೀಕ್ಷೆ ವಿವಾದ: ಬಿಹಾರ ಸಿಎಂ ನಿವಾಸದ ಬಳಿ ಬ್ಯಾರಿಕೇಡ್ ಮುರಿದ ವಿದ್ಯಾರ್ಥಿಗಳು, ಜಲಫಿರಂಗಿಗೆ ಜಗ್ಗದೆ ರೇನ್ ಡ್ಯಾನ್ಸ್ ಮಾಡಿ ಪ್ರತಿಭಟನೆ!

'ಕಾಂಗ್ರೆಸ್ ಸರ್ಕಾರದ ವೈಫಲ್ಯ' ವಿರೋಧಿಸಿ ಸೆಪ್ಟೆಂಬರ್ 1 ರಿಂದ 10ರವರೆಗೆ ರಾಯಚೂರಿನಿಂದ ಬಳ್ಳಾರಿಗೆ BJP-JDS ಪಾದಯಾತ್ರೆ!