ರಾಜ್ಯ

ವಿಜಯಪುರ: ಪ್ರೀತಿಗೆ ಪೋಷಕರ ವಿರೋಧ, ಬಾವಿಗೆ ಹಾರಿ ಯುವಜೋಡಿ ಆತ್ಮಹತ್ಯೆ!

Raghavendra Adiga

ವಿಜಯಪುರ: ಅಂತರ್ ಧರ್ಮೀಯ ಪ್ರೇಮ ಎನ್ನುವ ಕಾರಣಕ್ಕೆ ಮದುವೆಗೆ ಪೋಷಕರ ವಿರೋಧ ವ್ಯಕ್ತವಾಗಿದ್ದ ಕಾರಣ ಮನನೊಂದ ಪ್ರೇಮಿಗಳಿಬ್ಬರೂ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿಜಯಪುರ ಜಿಲ್ಲೆ ಸಿಂಧಗಿ ತಾಲೂಕಿನ ಬನಹಟ್ಟಿಯಲ್ಲಿ ನಡೆದಿದೆ.

ಮೃತ ಯುವಕನನ್ನು ಶಿವಾನಂದ್ ಚೌಧರಿ(19) ಎಂದು ಗುರುತಿಸಲಾಗಿದ್ದು ಈತ ಅನ್ಯಧರ್ಮದ ಯುವತಿಯನ್ನು ಪ್ರೀತಿಸಿದ್ದನು. ಆದರೆ ಮನೆಯವರ ವಿರೋಧ ವ್ಯಕ್ತವಾಗಿದ್ದ ಹಿನ್ನೆಲೆ ಇಬ್ಬರೂ ಜತೆಯಾಗಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಭಾನುವಾರ ಇಬ್ಬರ ಶವಗಳೂ ಗ್ರಾಮದ ಹೊರವಲಯದಲ್ಲಿ ಪತ್ತೆಯಾಗಿದ್ದು ದೇವರಹಿಪ್ಪರಗಿ ಪೊಲೀಸ್ ಠಾಣೆಯ ಪಿಎಸ್‍ಐ ರವಿ ಯಡವಣ್ಣವರ್ ಹಾಗೂ ಇದತ್ರರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. 

ದೇವರಹಿಪ್ಪರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

SCROLL FOR NEXT