ರಾಜ್ಯ

ಸ್ವಾತಂತ್ರ್ಯ ಪೂರ್ವದ ಅಸಹಕಾರ ಚಳುವಳಿ: ಉಡುಪಿಯಲ್ಲಿ ಮೊದಲ ಸಾಮೂಹಿಕ ಹೋರಾಟ

Shilpa D

ಉಡುಪಿ: ಸ್ವದೇಶಿ ಚಳುವಳಿ ಭಾರತದ ಸ್ವಾತಂತ್ರ್ಯ ಹೋರಾಟದ ಭಾಗವಾಗಿದ್ದು ಬ್ರಿಟಿಷ್ ಸಾಮ್ರಾಜ್ಯದ ಅಧಿಕಾರವನ್ನು ಮೊಟಕುಗೊಳಿಸುವ ಹಾಗೂ ಭಾರತದ ಆರ್ಥಿಕತೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಒಂದು ಯಶಸ್ವೀ ರಣನೀತಿಯಾಗಿತ್ತು. 

ಈ ಆಂದೋಲನ ಬ್ರಿಟಿಷ್ ಉತ್ಪನ್ನಗಳ ಬಹಿಷ್ಕಾರ ಮತ್ತು ದೇಶೀಯ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸುವ ಉದ್ದೇಶ  ಹೊಂದಿತ್ತು. 1920 ರಲ್ಲಿ ಗಾಂಧಿ ಇದನ್ನು ಆರಂಭಿಸಿದರು.

ಉಡುಪಿಯಲ್ಲಿ ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ ಮೊದಲ ಸಾಮೂಹಿಕ ಚಳುವಳಿ ಇದಾಗಿದೆ. ಆರಂಭಿಕ ಸಭೆಗಳು ಅಜ್ಜರಾಕಡ್ ಮತ್ತು ಮುಕುಂದ್ ನಿವಾಸದಲ್ಲಿ  ನಡೆದವು. ನಂತರ, ಶ್ರೀ ಕೃಷ್ಣ ಮಠದ ಕಾರ್ ಸ್ಟ್ರೀಟ್‌ನಲ್ಲಿ ಸಾರ್ವಜನಿಕ ಸಭೆಗಳು ನಡೆದವು.

ಅಸಹಕಾರ ಚಳವಳಿ ವೇಳೆ, ಹಿರಿಯಡ್ಕ ರಾಮರಾಯ ಮಲ್ಯ ‘ಸತ್ಯಾಗ್ರಹಿ’, ರಾಷ್ಟ್ರೀಯತಾವಾದಿ ಮನೋಭಾವದ ಪತ್ರಿಕೆ ಆರಂಭಿಸಿದರು, ಅದರ ಸಂಪಾದಕರು ಮತ್ತು ತಂಡವು ಸರ್ಕಾರದ ಕಠಿಣ ಕ್ರಿಮಿನಲ್ ಕ್ರಮವನ್ನು ಎದುರಿಸಬೇಕಾಯಿತು. ಅಸಹಕಾರ ಚಳವಳಿಯ ಸಂದರ್ಭದಲ್ಲಿ ಸರ್ಕಾರಿ ನಿಯಂತ್ರಿತ ಅಥವಾ ಅನುದಾನಿತ ಶಾಲೆಗಳಿಂದ ವಿದ್ಯಾರ್ಥಿಗಳನ್ನು ಹಿಂತೆಗೆದುಕೊಳ್ಳುವ ಕರೆ ಬಂದಿದ್ದರಿಂದ, 1920 ರ ಸೆಪ್ಟೆಂಬರ್ ನಂತರ ಉಡುಪಿಯಲ್ಲಿ ಅನೇಕ ರಾಷ್ಟ್ರೀಯತಾವಾದಿ ಶಾಲೆಗಳನ್ನು
ಪ್ರಾರಂಭಿಸಲಾಯಿತು. ಅಂತೆಯೇ, ವಕೀಲರು ನ್ಯಾಯಾಲಯಗಳನ್ನು ಬಹಿಷ್ಕರಿಸಿದರು.

ಆಂದೋಲನದಲ್ಲಿ ಭಾಗವಹಿಸಿದ ಪ್ರಮುಖ ವ್ಯಕ್ತಿಗಳಲ್ಲಿ ಆರ್.ಎಸ್.ಶೆಣೈ, ಸಂತಾರು ಅನಂತಪದ್ಮನಾಭಟ್ ಭಟ್, ಕುಬೇರ ಪಾಂಡುರಂಗ ರಾವ್, ಎಸ್.ಯು.ಪನಿಯಡಿ, ಟಾನ್ಸ್ ಮುಕುಂದ ಪೈ, ಎಂ ವಿಟ್ಟಲ್ ಕಾಮತ್, ಸತ್ಯಮಿತ್ರ ಬಂಗೇರಾ, ಕೊಚ್ಚಿಕಾರ್ ಪಾಂಡುರಂಗ್ ಪೈ, ನಾಯಂಪಲ್ಲಿ ಆನಂದ್ ರಾವ್ , ಟಾನ್ಸ್ ರಘುನಾಥ್ ಪೈ, ಟಾನ್ಸ್ ಉಪೇಂದ್ರ ಪೈ ಮತ್ತು ನಾನಲಾಲ್ ಗೋವಿಂದಜಿ ಭಾಗವಹಿಸಿದ್ದರು.

1930 ಏಪ್ರಿಲ್ 13 ರಂದು ಉಡುಪಿಯಿಂದ ಉಪ್ಪಿನ ಸತ್ಯಾಗ್ರಹ ಆರಂಭವಾಯಿತು. ಮಾಲ್ಪೆಯ ವಡಭಂಡೇಶ್ವರದಲ್ಲಿ ಕಾರ್ ಸ್ಟ್ರೀಟ್‌ನಿಂದ ಸಮುದ್ರ ತೀರಕ್ಕೆ ಮೆರವಣಿಗೆ ನಡೆಸುತ್ತಿರುವ ಸತ್ಯಾಗ್ರಹಿಗಳ ಬೃಹತ್ ಸಮಾವೇಶದೊಂದಿಗೆ ಪ್ರಾರಂಭಿಸಲಾಯಿತು. ಆಗಸ್ಟ್ 1942 ರಲ್ಲಿ ಪ್ರಾರಂಭವಾದ ಕ್ವಿಟ್ ಇಂಡಿಯಾ ಚಳವಳಿ ಉಡುಪಿಯಲ್ಲಿ ತೀವ್ರತರವಾದ ಹೋರಾಟ ಪಡೆಯಿತು. 

ಉಡುಪಿಯ ಶ್ರೀ ಅನಂತೇಶ್ವರ ದೇವಸ್ಥಾನದ 40 ಅಡಿ ಎತ್ತರದ ಏಕಶಿಲೆಯ ಸ್ತಂಭದ ಮೇಲೆ ಯು ಶೇಷಾ ಎಂಬ ಯುವಕ ಕರ್ಫ್ಯೂ ಧಿಕ್ಕರಿಸಿ ತ್ರಿವರ್ಣವನ್ನು ಹಾರಿಸಿದ್ದ ಎಂದು ಉಡುಪಿಯ ಎಂಜಿಎಂ ಕಾಲೇಜಿನ ಗಾಂಧಿ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಸಂಶೋಧಕ ಯು ವಿನೀತ್ ರಾವ್ ಹೇಳಿದ್ದಾರೆ.

SCROLL FOR NEXT