ಸಾಂದರ್ಭಿಕ ಚಿತ್ರ 
ರಾಜ್ಯ

'ಎರಡು ವರ್ಷದ ಕಂದಮ್ಮನ ಅಂತ್ಯಕ್ರಿಯೆ ಮಾಡುವಾಗ ಹೃದಯ ವಿಲವಿಲ ಒದ್ದಾಡಿತು'

ಹೃದಯ ವಿಚಲಿತವಾಗುವುದು ಯಾವಾಗ ಎಂಬುದು ತಿಳಿದಿದೆಯೇ? 2 ವರ್ಷದ ಕಂದಮ್ಮನನ್ನು ಅಂತ್ಯಕ್ರಿಯೆಗೆ ಕೊಂಡೊಯ್ಯುವಾಗ ಅನುಭವಿಸಿದ ಯಾತನೆ ಅಷ್ಟಿಷ್ಟಲ್ಲ ಎಂದು ಮರ್ಸಿ ಏಂಜೆಲ್ಸ್ ಸದಸ್ಯ ಜೆಮ್ ಶೆಡ್ ರೆಹಮಾನ್ ತಿಳಿಸಿದ್ದಾರೆ

ಬೆಂಗಳೂರು: ಹೃದಯ ವಿಚಲಿತವಾಗುವುದು ಯಾವಾಗ ಎಂಬುದು ತಿಳಿದಿದೆಯೇ? 2 ವರ್ಷದ ಕಂದಮ್ಮನನ್ನು ಅಂತ್ಯಕ್ರಿಯೆಗೆ ಕೊಂಡೊಯ್ಯುವಾಗ ಅನುಭವಿಸಿದ ಯಾತನೆ ಅಷ್ಟಿಷ್ಟಲ್ಲ ಎಂದು ಮರ್ಸಿ ಏಂಜೆಲ್ಸ್ ಸದಸ್ಯ ಜೆಮ್ ಶೆಡ್ ರೆಹಮಾನ್ ತಿಳಿಸಿದ್ದಾರೆ,

ರಕ್ತದ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ 2 ವರ್ಷದ ಮಗು ಕೋವಿಡ್ ಗೆ ತುತ್ತಾಗಿತ್ತು,  ಸೋಮವಾರ ಬೆಳಗ್ಗೆ ಮಗು ಸಾವನ್ನಪ್ಪಿತ್ತು, ಮಗುವಿನ ಪೋಷಕರು ಪಶ್ಚಿಮ ಬಂಗಾಳದವರಾಗಿದ್ದು, ಬ್ಲಡ್ ಕ್ಯಾನ್ಸರ್ ನಿಂದ ಬಳಲುತ್ತಿದ್ದ ತಮ್ಮ 2 ವರ್ಷದ ಹೆಣ್ಣು ಮಗುವಿನ ಚಿಕಿತ್ಸೆಗಾಗಿ 2019ರ ಡಿಸೆಂಬರ್ ನಲ್ಲಿ ಬೆಂಗಳೂರಿಗೆ ಬಂದಿದ್ದರು. 

ಮಗುವಿಗೆ ಸೆಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಕೆಲವು ವಾರಗಳ ಹಿಂದೆ ಮಗುವಿಗೆ ಕೊರೋನಾ ಪಾಸಿಟಿವ್ ಕಂಡು ಬಂದಿತ್ತು,ಹೀಗಾಗಿ ಮಗು ಬದುಕುಳಿಯಲಿಲ್ಲ,

ಸೋಮವಾರ ಮುಂಜಾನೆ ಮಗು ಸಾವನ್ನಪ್ಪಿತ್ತು, ನಮ್ಮ ತಂಡದಿಂದ ನಾನು ಮತ್ತಿಬ್ಬರು ಸದಸ್ಯರಿಗೆ ಮಧ್ಯಾಹ್ನಕ್ಕೆ ವಿಷಯ ತಿಳಿಯಿತು. ಮಗುವಿನ ಮೃತದೇಹ ತೆಗೆದುಕೊಳ್ಳಲು ಹೋದಾಗ ಆಕೆಯ ಪೋಷಕರು ಆಘಾತಕ್ಕೀಡಾಗಿದ್ದರು, ನಮಗೂ ಕೂಡ ಇದು ಕಷ್ಟಕರ ಪರಿಸ್ಥಿತಿ ಎನಿಸಿತು. ಇದೇ ಮೊದಲ ಬಾರಿಗೆ ಕೊರೋನಾದಿಂದ ಸಾವನ್ನಪ್ಪಿದ ಅತಿ  ಕಡಿಮೆ ವಯಸ್ಸಿನ ಮೃತದೇಹ ತೆಗೆದುಕೊಂಡಿದ್ದು, ಹೆಚ್ಚಿನ ಮೃತದೇಹಗಳು 50 ವರ್ಷದ ಮೇಲ್ಪಟ್ಟವಾಗಿದ್ದವು.

ಸಂಜೆ 5ಗಂಟೆ ವೇಳೆ ಕುಡ್ಲುವಿನಲ್ಲಿರುವ ಅಂತ್ಯ ಸಂಸ್ಕಾರ ಸ್ಥಳಕ್ಕೆ ಬಂದು ಅಂತಿಮ ವಿಧಿ ವಿಧಾನ ನೆರವೇರಿಸಿದೆವು, ಇದೊಂದು ಹೃದಯ ವಿದ್ರಾವಕ ಘಟನೆಯಾಗಿತ್ತು. ನಮಗೆ ಸಂಸ್ಕಾರ ಮಾಡಲು ಆಗಲಿಲ್ಲ, ಆದರೆ ಮಾಡಲೇಬೇಕಿತ್ತು. ನನ್ನ ಸ್ವಂತ ಮಗುವಿಗೂ ಕೂಡ 2 ವರ್ಷ. ಈ ಸಮಯ ನನಗೆ ಸವಾಲಾಗಿತ್ತು. ಶವ ಸಂಸ್ಕಾರದ ನಂತರ ಸುಮಾರು 1 ಗಂಟೆ ಸಮ ಆ್ಯಂಬುನೆಲ್ಸ್ ನಲ್ಲೇ ಕುಳಿತೆವು, ಅಲ್ಲಿ ಬರೀ ಮೌನವಿತ್ತು, ನಾವು ಮೂವರು ಕೂಡ ಅದೇ ಮದುವಿನ ಬಗ್ಗೆ ಚಿಂತಿಸುತ್ತಿದ್ದೆವು ಎಂದು ಜೆಮ್ ಶೆಡ್ ರೆಹಮಾನ್
ಕಣ್ಣೀರಾದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

ಡಿಕೆ ಶಿವಕುಮಾರ್ ಇದ್ದ ವೇದಿಕೆಯಲ್ಲೇ ಹೈಡ್ರಾಮಾ: RSS ಸಮವಸ್ತ್ರದಲ್ಲಿ ಬಿಜೆಪಿ ಶಾಸಕ ಮುನಿರತ್ನ ಧರಣಿ! Video

ಪಶ್ಚಿಮ ಬಂಗಾಳ ವೈದ್ಯಕೀಯ ವಿದ್ಯಾರ್ಥಿನಿ ಗ್ಯಾಂಗ್ ರೇಪ್ ಕೇಸ್: ಮೂವರ ಬಂಧನ

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

SCROLL FOR NEXT