ರಾಜ್ಯ

ಮುರುಡೇಶ್ವರಕ್ಕೆ ಪ್ರವಾಸ  ಬಂದಿದ್ದ ಬೆಂಗಳುರಿನ ಯುವಕ ಸೇರಿ ಇಬ್ಬರು ಸಮುದ್ರ ಪಾಲು

Raghavendra Adiga

ಭಟ್ಕಳ: ಆಗಸ್ಟ್ 30 ರ ಭಾನುವಾರ ಪ್ರವಾಸಕ್ಕಾಗಿ ಮುರುಡೇಶ್ವರಕ್ಕೆ ಆಗಮಿಸಿದ್ದ ಎರಡು ವಿಭಿನ್ನ  ಗುಂಪಿಗೆ ಸೇರಿದ ಇಬ್ಬರು ಯುವಕರು ಒಂದೇ ದಿನ ಸಮುದ್ರ ಪಾಲಾಗಿದ್ದಾರೆ. ಅವರಲ್ಲಿ ಒಬ್ಬರು ಬೆಂಗಳೂರಿನವರಾಗಿದ್ದರೆ, ಇನ್ನೊಬ್ಬರು ಶಿವಮೊಗ್ಗ ಜಿಲ್ಲೆಯ ಸೊರಬದವರೆಂದು ತಿಳಿದುಬಂದಿದೆ.

ಮೃತರಾದ  ಅಭಿಜಿತ್ (24) ಯಲಹಂಕ ನ್ಯೂಟೌನ್ ಬೆಂಗಳೂರಿನವರಾಗಿದ್ದು ಅವರು ಎಲೆಕ್ಟ್ರಾನಿಕ್ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದರು.

ಶಿವಮೊಗ್ಗ ಜಿಲ್ಲೆಯ ಸೊರಬದ ಹಳೆಬ್ಸೊರಬದ ಜಯಂತಿವಾಡ ಮೂಲದ ಶರತ್ ಜಗದೀಶ್  ಬಳ್ಳಾರಿ (18)  ಇನ್ನೋರ್ವ ಮೃತ ದುರ್ದೈವಿಯಾಗಿದ್ದಾರೆ. 

ಎರಡೂ ಶವಗಳನ್ನು ಸಮುದ್ರದಿಂದ ಎತ್ತಲಾಗಿದ್ದು ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು ಪ್ರಕರಣ ದಾಖಲಾಗಿದೆ. 

SCROLL FOR NEXT