ಸಂಗ್ರಹ ಚಿತ್ರ 
ರಾಜ್ಯ

ಸಿಲಿಕಾನ್ ಸಿಟಿ ಉಡ್ತಾ ಬೆಂಗಳೂರು ಆಗಲು ನಮ್ಮ ಪೊಲೀಸ್ ಪಡೆ ಬಿಡುವುದಿಲ್ಲ: ಗೃಹ ಸಚಿವ ಬೊಮ್ಮಾಯಿ

ರಾಜ್ಯದಲ್ಲಿ ಡ್ರಗ್ಸ್ ಪ್ರಭಾವಕ್ಕೆ ಚಿತ್ರರಂಗ ಮಾತ್ರವಲ್ಲದೇ ಬಹಳಷ್ಟು ಜನರು ಒಳಗಾಗಿದ್ದಾರೆ. ನಾವೂ ಈ ಬಾರಿ ಈ ಜಾಲದ ಮೂಲಕ್ಕೇ ಕೈ ಹಾಕಿದ್ದು, ಅದನ್ನು ಭೇಧಿಸುವಂತೆ ಸೂಚಿಸಿದ್ದೇನೆಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. 

ಬೆಂಗಳೂರು: ರಾಜ್ಯದಲ್ಲಿ ಡ್ರಗ್ಸ್ ಪ್ರಭಾವಕ್ಕೆ ಚಿತ್ರರಂಗ ಮಾತ್ರವಲ್ಲದೇ ಬಹಳಷ್ಟು ಜನರು ಒಳಗಾಗಿದ್ದಾರೆ. ನಾವೂ ಈ ಬಾರಿ ಈ ಜಾಲದ ಮೂಲಕ್ಕೇ ಕೈ ಹಾಕಿದ್ದು, ಅದನ್ನು ಭೇಧಿಸುವಂತೆ ಸೂಚಿಸಿದ್ದೇನೆಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ರಾಜ್ಯ ರಾಜಧಾನಿಯನ್ನು ಉಡ್ತಾ ಬೆಂಗಳೂರು ಆಗಲು ಕೇಂದ್ರ ಮಾದಕ ವಸ್ತು ನಿಗ್ರಹ ದಳ ಬಿಡುವುದಿಲ್ಲ. ಎನ್'ಸಿಬಿಯವರು ಕೆಲವು ಸಿಂಥೆಟಿಕ್ ಡ್ರಗ್ಸ್ ವ್ಯವಹಾರ ಮಾಡುವವರನ್ನು ಬಂಧನಕ್ಕೊಳಪಡಿಸಿದ್ದಾರೆ. ಬಂಧಿತ ನಾಲ್ವರಿಂದ ಸಾಕಷ್ಟು ಹೆಚ್ಚಿನ ಮಾಹಿತಿ ಹೊರ ಬಂದಿದೆ. ಚಿತ್ರರಂಗದ ಕೆಲವರೂ ಇದರಲ್ಲಿ ಸೇರಿದ್ದಾರೆನ್ನುವ ಮಾಹಿತಿ ಇದೆ ಎಂದು ಹೇಳಿದ್ದಾರೆ. 

ಡ್ರಗ್ಸ್ ವ್ಯವಹಾರಕ್ಕೆ ಬಳಕೆಯಾಗುತ್ತಿದ್ದ ಡಾರ್ಕ್ ನೆಟ್ ಎನ್ನುವ ಆನ್'ಲೈನ್ ವೆಬ್'ಸೈಟ್'ನ್ನು ಭೇಧಿಸಿದ್ದೇವೆ. ಇಲ್ಲಿ ಪೋಸ್ಟಲ್ ಮೂಲಕವೂ ಪೂರೈಕೆಯಾಗುತ್ತಿತ್ತು ಎಂಬ ಮಾಹಿತಿಯೂ ಹೊರಬಂದಿದೆ. ಚಿತ್ರರಂಗ ಇರಲಿ, ಇನ್ನಾವುದೇ ರಂಗವಿರಲಿ. ತಪ್ಪು ಎಸಗಿದ್ದರೆ ನಾವು ಯಾರನ್ನೂ ಬಿಡುವುದಿಲ್ಲ. ಡ್ರಗ್ಸ್ ಬಗ್ಗೆ ಹೇಳಿಕೆ ನೀಡಿರುವ ಇಂದ್ರಜಿತ್ ಲಂಕೇಶ್'ಗೆ ನೋಟಿಸ್ ನೀಡಿದ್ದೇವೆ. ಅವರು ಏನೇನು ಮಾಹಿತಿ ಕೊಡುತ್ತಾರೆಂದು ನೋಡುತ್ತೇವೆಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Unnao Rape Case: ಕುಲದೀಪ್ ಸಿಂಗ್ ಸೆಂಗಾರ್'ಗೆ ತೀವ್ರ ಹಿನ್ನಡೆ, ಜೀವಾವಧಿ ಶಿಕ್ಷೆ ರದ್ದುಗೊಳಿಸಿದ್ದ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ತಡೆ

ಡೆಹ್ರಾಡೂನ್‌ನಲ್ಲಿ ತ್ರಿಪುರಾ ವಿದ್ಯಾರ್ಥಿಯ ಹತ್ಯೆ: 'ಭಯಾನಕ ದ್ವೇಷ' ದ ಅಪರಾಧ, BJP ವಿರುದ್ಧ ರಾಹುಲ್ ಗಾಂಧಿ ಕಿಡಿ!

Horrific Video: Mahindra Bolero ವಾಹನದ ಮೇಲೆ ಬಿದ್ದ ಟ್ರಕ್, ಕಾರು ಅಪ್ಪಚ್ಚಿ, ಚಾಲಕ ಸಾವು!

ಅರಾವಳಿ ಬೆಟ್ಟಗಳು, ಶ್ರೇಣಿಗಳ ಕುರಿತ ವ್ಯಾಖ್ಯಾನ: ನ. 20 ರ ತೀರ್ಪಿಗೆ ಸುಪ್ರೀಂ ಕೋರ್ಟ್ ತಡೆ!

ದೆಹಲಿ ವಾಯು ಗುಣಮಟ್ಟ ಅತ್ಯಂತ 'ಗಂಭೀರ'; ದಟ್ಟವಾದ ಮಂಜು; 128 ವಿಮಾನಗಳು ರದ್ದು

SCROLL FOR NEXT