ರಾಜ್ಯ

ಚಳಿಗಾಲದ ಅಧಿವೇಶನದ ಮೊದಲ ದಿನ ಸಿಎಂ 45 ನಿಮಿಷ ಮಾತ್ರ ಹಾಜರು: ಆಪ್ತ ಸ್ನೇಹಿತನ ಕುಟುಂಬದ ವಿವಾಹದಲ್ಲಿ ಭಾಗಿ

Shilpa D

ಬೆಂಗಳೂರು: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಇಂದಿನಿಂದ ಆರಂಭವಾಗುವ ಚಳಿಗಾಲದ ಅಧಿವೇಶನದ ಮೊದಲ ದಿನದಲ್ಲಿ 45 ನಿಮಿಷ ಮಾತ್ರ ಸದನದಲ್ಲಿ ಪಾಲ್ಗೋಳ್ಳಲಿದ್ದಾರೆ.

ಸಿಎಂ ತಮ್ಮ ಆಪ್ತ ಸ್ನೇಹಿತರ ಕುಟುಂಬಸ್ಥರ ವಿವಾಹ ಸಮಾರಂಭದಲ್ಲಿ ಪಾಲ್ಗೋಳ್ಳಲು ಸಾಗರಕ್ಕೆ ತೆರಳಲಿದ್ದಾರೆ.  ಬೆಳಗ್ಗೆ 11 ಗಂಟೆಗೆ ಸರಿಯಾಗಿ ವಿಧಾನಸಭೆಗೆ ಸದನಕ್ಕೆ ಬರಲಿದ್ದಾರೆ.

ಸಿಎಂ ಆಪ್ತ ಶ್ರೀಪಾದ ಹೆಗಡೆ ನಿಸ್ರಾನಿ ಅವರ ಕುಟುಂಬಸ್ಥರ ವಿವಾಹ ಕಾರ್ಯಕ್ರಾಮಕ್ಕಾಗಿ ಖಾಸಗಿ ಚಾಪರ್ ನಲ್ಲಿ ಬೆಳಗ್ಗೆ 11.45ಕ್ಕೆ  ಸಾಗರಕ್ಕೆ ತೆರಳಲಿದ್ದಾರೆ.

ಸ್ವಲ್ಪ ಸಮಯದವರೆಗೂ ವಿವಾಹದಲ್ಲಿ ಭಾಗಿಯಾಗಿ 2.5ಕ್ಕೆ ವಾಪಸ್ ತೆರಳಲಿದ್ದು, ಮಧ್ಯಾಹ್ನ 3.45ಕ್ಕೆ ಬೆಂಗಳೂರಿಗೆ ಮರಳಲಿದ್ದಾರೆ. ಕಳೆದ ಕೆಲವು ದಿನಗಳಿಂದ ಶಿವಮೊಗ್ಗದಲ್ಲಿ ಉದ್ವಿಘ್ನ ವಾತಾವರಣ ನಿರ್ಮಾಣವಾಗಿದ್ದು ಸಿಎಂ ಭೇಟಿಗಾಗಿ ವಿಶೇಷ ಭದ್ರತೆ ವ್ಯವಸ್ಥೆ ಮಾಡಲಾಗಿದೆ.

SCROLL FOR NEXT