ರಾಜ್ಯ

ಸಿಐಡಿ ಡಿವೈಎಸ್ಪಿ ಲಕ್ಷ್ಮೀ ಈ ಹಿಂದೆ ಎರಡು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದರು!

Manjula VN

ಬೆಂಗಳೂರು: ಆತ್ಮಹತ್ಯೆಗೆ ಶರಣಾಗಿದ್ದ ಸಿಐಡಿ ಡಿವೈಎಸ್ಪಿ ಲಕ್ಷ್ಮೀ ಅವರು, ಈ ಹಿಂದೆ ಎರಡು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದರು ಎಂದು ಮೂಲಗಳು ತಿಳಿಸಿವೆ. 

ಬಿಬಿಎಂಪಿ ಗುತ್ತಿದಾರರಾಗಿರುವ ತಮ್ಮ ಸ್ನೇಹಿತ ಮನೋಹರ್ ಅಲಿಯಾಸ್ ಮನು ಎಂಬುವವರನ್ನು ಡಿವೈಎಸ್ಪಿ ಲಕ್ಷ್ಮೀ ಅವರು ಹೆಚ್ಚು ಅಚ್ಚಿಕೊಂಡಿದ್ದರು. ಹಲವು ವರ್ಷಗಳಿಂದಲೂ ಲಕ್ಷ್ಮೀ ಹಾಗೂ ಮನು ಇಬ್ಬರು ಸಾಕಷ್ಟು ಆಪ್ತ ಸ್ನೇಹಿತರಾಗಿದ್ದರು. 

ತಮ್ಮ ವೈವಾಹಿಕ ಜೀವನ ಲಕ್ಷ್ಮೀ ಅವರಿಂದ ಹಾಳಾಗುತ್ತಿದೆ ಎಂದು ತಿಳಿದಿದ್ದ ಮನು ಅವರು ಕೆಲ ದಿನಗಳಿಂದ ಲಕ್ಷ್ಮೀ ಅವರಿಂದ ಅಂತರ ಕಾಯ್ದುಕೊಳ್ಳಲು ಆರಂಭಿಸಿದ್ದರು ಎಂದು ಅನ್ನಪೂರ್ಣೇಶ್ವರಿ ನಗರ ಪೊಲೀಸರು ತಿಳಿಸಿದ್ದಾರೆ. 

ಈ ನಡುವೆ ಮರಣೋತ್ತರ ಪರೀಕ್ಷೆ ನಡೆಸಿದ್ದ ವೈದ್ಯರು ಮೌಖಿಕ ಹೇಳಿಕೆ ನೀಡಿದ್ದು, ಇದೊಂದು ಆತ್ಮಹತ್ಯೆ ಎಂದು ಹೇಳಿದ್ದಾರೆ. ಆದರೆ, ನಾವೀಗ ವರದಿಗಾಗಿ ಕಾಯುತ್ತಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿ 1-2 ದಿನಗಳಲ್ಲಿ ಸಿಗಲಿದೆ ಎಂದು ಪೊಲೀಸರು ಹೇಳಿದ್ದಾರೆ. 

ಲಕ್ಷ್ಮೀ ಅವರ ಕುಟುಂಬಸ್ಥರ ಹೇಳಿಕೆಯನ್ನು ಶೀಘ್ರದಲ್ಲಿಯೇ ದಾಖಲು ಮಾಡಿಕೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

SCROLL FOR NEXT