ಬಸ್ 
ರಾಜ್ಯ

ಇಂಧನ ಉಳಿತಾಯ: ವಿಜಯಪುರ ಕೆ.ಎಸ್. ಆರ್. ಟಿ. ಸಿ ಘಟಕ ದೇಶಕ್ಕೆ ಮಾದರಿ

 ದೇಶದಲ್ಲೇ ಅತೀ ಹೆಚ್ಚಿನ  ಇಂಧನ (ಡಿಸೇಲ್) ಉಳಿತಾಯ ಮಾಡಿದ ಕೀರ್ತಿ ವಿಜಯಪುರ ಕೆ ಎಸ್ ಆರ್ ಟಿ ಸಿ ವಿಭಾಗಕ್ಕೆ ಸಂದಿದೆ.

ವಿಜಯಪುರ: ದೇಶದಲ್ಲೇ ಅತೀ ಹೆಚ್ಚಿನ  ಇಂಧನ (ಡಿಸೇಲ್) ಉಳಿತಾಯ ಮಾಡಿದ ಕೀರ್ತಿ ವಿಜಯಪುರ ಕೆ ಎಸ್ ಆರ್ ಟಿ ಸಿ ವಿಭಾಗಕ್ಕೆ ಸಂದಿದೆ. ಈ ಹಿನ್ನಲೆಯಲ್ಲಿ ಪಿ.ಸಿ.ಆರ್.ಎ ಸಂಸ್ಥೆಯಿಂದ ಕೊಡ ಮಾಡುವ ಪ್ರಶಸ್ತಿಯನ್ನು ಈಶಾನ್ಯ ರಾಜ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಪಡೆದುಕೊಂಡಿದೆ.‌ಇದರಲ್ಲಿ ವಿಜಯಪುರ ವಿಭಾಗೀಯ ಕಚೇರಿಗಳು ಡಿಸೇಲ್ ಉಳಿತಾಯ ಮಾಡಿ ರಾಜ್ಯಕ್ಕೆ ಮಾತ್ರವಲ್ಲ ದೇಶದಲ್ಲೇ ಪ್ರಥಮ‌ ಸ್ಥಾನ ಪಡೆದುಕೊಂಡಿದೆ.

ವಿಜಯಪುರ ‌ಜಿಲ್ಲೆಯದ್ದೇ ಮೂರು ಡಿಪೋಗಳು ಕಡಿಮೆ ಇಂಧನ  ಬಳಸಿ ಹೆಚ್ಚು ಮೈಲೇಜ್ ಪಡೆಯುವಲ್ಲಿಯೂ ಹೆಸರು ಪಡೆದು ಪ್ರಥಮ, ದ್ವೀತಿಯ, ಮತ್ತು ತೃತಿಯ ಬಹುಮಾನಗಳನ್ನು ಈ ಸಾರಿಗೆ ಘಟಕ ಪಡೆದುಕೊಂಡಿದೆ.  

ಈ ಕುರಿತು ಮಾತನಾಡಿದ ವಿಜಯಪುರ ಕೆ ಎಸ್ ಆರ್ ಟಿ ಸಿ‌ ವ್ಯವಸ್ಥಾಪಕ  ನಾರಾಯಣಪ್ಪ ಕುರುಬರ, ಕೊರೋನಾದಿಂದಾಗಿ ಸುಮಾರು ತಿಂಗಳಿನಿಂದ ಘಟಕ ನಷ್ಟದಲ್ಲಿತ್ತು. ನವೆಂಬರ್ ತಿಂಗಳಲ್ಲಿ ಚೇತರಿಕೆ ಕಂಡು ವಿಜಯಪುರ ಘಟಕಕ್ಕೆ 19 ಕೋಟಿ 17 ಲಕ್ಷ ರೂಪಾಯಿ ಆದಾಯ ಬಂದಿದೆ.

ಲಾಕ್ ಡೌನ್ ಸಮಯದಲ್ಲಿ 1 ಕಿಮೀ ಗೆ 24 ರೂಪಾಯಿ 13 ಪೈಸೆ ಆದಾಯ ಬರುತ್ತಿತ್ತು ಸದ್ಯ ಹೆಚ್ಚಳವಾಗಿ ಪ್ರತಿ ಕಿಲೋಮೀಟರ್ ಆದಾಯ 31 ರೂಪಾಯಿ 20 ಪೈಸೆಗೆ ಏರಿಕೆಯಾಗುತ್ತಿದೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

'ಮದುವೆಗೆ ಮುನ್ನ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸಿ': ಹರಿಯಾಣ BJP ಶಾಸಕ

ಭಾರತದ ಮೇಲೆ ಸುಂಕಾಸ್ತ್ರ ಜಾರಿ: ಮತ್ತೆ ಇಂಡೋ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಪುನರುಚ್ಛರಿಸಿದ ಡೊನಾಲ್ಡ್ ಟ್ರಂಪ್

SCROLL FOR NEXT