ರಾಜ್ಯ

ಡಿಜೆ ಹಳ್ಳಿ ಗಲಭೆ: ಮಾಜಿ ಮೇಯರ್ ಸಂಪತ್ ರಾಜ್ ಜಾಮೀನು ಅರ್ಜಿ ವಿಚಾರಣೆ ಜನವರಿಗೆ ಮುಂದೂಡಿಕೆ

Raghavendra Adiga

ಬೆಂಗಳೂರು: ಡಿಜೆ ಹಳ್ಳಿ ಗಲಭೆ ಪ್ರಕರಣದಲ್ಲಿ ಆರೋಪಿಯಾಗಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮಾಜಿ ಮೇಯರ್ ಸಂಪತ್ ರಾಜ್ ಅವರ ಜಾಮೀನು ಅರ್ಜಿ ವಿಚಾರಣೆ 2021ರ ಜನವರಿ ತಿಂಗಳಿಗೆ ಮುಂದೂಡಿಕೆ ಆಗಿದೆ.

ಘಟನೆ ನಡೆದು ಸುಮಾರು ಒಂದು ತಿಂಗಳ ನಂತರ ಪೋಲೀಸರಿಗೆ ಸೆರೆಯಾಗಿದ್ದ ಸಂಪತ್ ರಾಜ್ ನ್ಯಾಂಯಾಂಗ ಬಂಧನದಲ್ಲಿದ್ದಾರೆ. 

ಇಂದು ಸಂಪತ್ ರಾಜ್ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆಯ್ ನಡೆಸಿದ ನ್ಯಾಯಾಲಯ ವಿಚಾರಣೆಯನ್ನು ಜನವರಿ ಮೊದಲ ವಾರಕ್ಕೆ ಮುಂದೂಡಿದೆ. ಈ ಮೂಲಕ ಸಂಪತ್ ರಾಜ್ ಹೊಸ ವರ್ಷಾಚರಣೆ ಜೈಲಿನಲ್ಲೇ ನಡೆಸಬೇಕಾಗಿ ಬಂದಿದೆ.

SCROLL FOR NEXT