ರಾಜ್ಯ

ಹುಬ್ಬಳ್ಳಿ: ಪ್ರೀತಿ ಬೇಡ ದೂರವಾಗೋಣ ಎಂದದ್ದಕ್ಕೆ ಯುವತಿ ಮೇಲೆ ತಲ್ವಾರ್ ಬೀಸಿದ ಭಗ್ನಪ್ರೇಮಿ!

ತಾನು ಪ್ರೀತಿಸುತ್ತಿದ್ದ ಯುವತಿ ನನ್ನಿಂದ ದೂರವಾಗುತ್ತಾಳೆ ಎಂದು ತಿಳಿದಾಗ ಹತಾಶೆಗೊಂಡ ಭಗ್ನ ಪ್ರೇಮಿಯೊಬ್ಬ ನಡುರಸ್ತೆಯಲ್ಲೇ ಆಕೆಯ ಮೇಲೆ  ತಲ್ವಾರ್​ನಿಂದ ಹಲ್ಲೆ ಮಾಡಿದ  ಘಟನೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ನಡೆದಿದೆ.

ಹುಬ್ಬಳ್ಳಿ: ತಾನು ಪ್ರೀತಿಸುತ್ತಿದ್ದ ಯುವತಿ ನನ್ನಿಂದ ದೂರವಾಗುತ್ತಾಳೆ ಎಂದು ತಿಳಿದಾಗ ಹತಾಶೆಗೊಂಡ ಭಗ್ನ ಪ್ರೇಮಿಯೊಬ್ಬ ನಡುರಸ್ತೆಯಲ್ಲೇ ಆಕೆಯ ಮೇಲೆ  ತಲ್ವಾರ್​ನಿಂದ ಹಲ್ಲೆ ಮಾಡಿದ  ಘಟನೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ನಡೆದಿದೆ.

ಹುಬ್ಬಳ್ಳಿಯ ದೇಶಪಾಂಡೆ ನಗರದಲ್ಲಿ ಪ್ರೇಮಿ ಇಮ್ತಿಯಾಜ್ ಹಾಗೆ ತನ್ನ ಪ್ರೇಯಸಿಯ ಮೇಲೆ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಯುವಕ. 

ಯುವಕ ಇಮ್ತಿಯಾಜ್ ಕುಂದಗೋಳದ ಕುಂಕುರ ಗ್ರಾಮದವನಾಗಿದ್ದು ಆಟೋ ಚಾಲಕನಾಗಿ ಜೀವನ ನಡೆಸುತ್ತಿದ್ದ. ಇವನು ಕಳೆದ ಎರಡು ವರ್ಷಗಳಿಂದ ದೇಶಪಾಂಡೆ ನಗರದ ಯುವತಿಯನ್ನು ಪ್ರೀತಿಸುತ್ತಿದ್ದ. ಮೊದಲು ಪ್ರೀತಿಗೆ ಒಪ್ಪಿಕೊಂಡಿದ್ದ ಯುವತಿ ಇತ್ತೀಚೆಗೆ ಅವನಿಂದ ದೂರವಾಗಲು ಬಯಸಿದ್ದಾಳೆ. ಇದರಿಂದ ಹತಶಾನಾಗಿದ್ದ ಇಮ್ತಿಯಾಜ್ ಇಂದು ಬೆಳಿಗ್ಗೆ ಮಾಸ್ಕ್ ಧರಿಸಿ ಬಂದು ಯುವತಿಯ ಮೇಲೆ ಮನಬಂದಂತೆ ಹಲ್ಲೆ ಮಾಡಿದ್ದಾನೆ

ಘಟನೆಯಿಂದ ಯುವತಿ ಗಂಭೀರ ಗಾಯಗೊಂಡಿದ್ದು ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಈ ಸಂಬಂಧ ಉಪನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೋಲೀಸರು ಆರೋಪಿ ಇಮ್ತಿಯಾಜ್ ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

SCROLL FOR NEXT